ದಿನ ಭವಿಷ್ಯ: 22 ಆಗಸ್ಟ್ 2025 ಶುಕ್ರವಾರ- ಇನ್ನೊಬ್ಬರನ್ನು ಹೊಣೆ ಮಾಡಬೇಡಿ
Published 21 ಆಗಸ್ಟ್ 2025, 18:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಲವು ದಿನಗಳ ನಂತರ ತಾಯಿಯೊಂದಿಗೆ ಕಳೆದ ಸಮಯ ಮನಸ್ಸಿಗೆ ಮುದ ನೀಡಲಿದೆ. ಮನೆಯಲ್ಲಿನ ಸಣ್ಣ ಮಕ್ಕಳ ಆರೋಗ್ಯದಲ್ಲಿನ ಏರುಪೇರು ಕಳವಳ ತಂದೊಡ್ಡಬಹುದು. ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ.
21 ಆಗಸ್ಟ್ 2025, 18:32 IST
ವೃಷಭ
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಎದುರಾಗುವ ಏರಿಳಿತದ ನಡುವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಪರಿಸ್ಥಿತಿಯು ಕ್ಷಣಿಕ ಆದ್ದರಿಂದ ಯಾವುದೇ ವಿಚಾರಗಳಿಗೂ ಬೇಸರಪಡುವ ಅವಶ್ಯಕತೆ ಇಲ್ಲ.
21 ಆಗಸ್ಟ್ 2025, 18:32 IST
ಮಿಥುನ
ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ಈಡೇರಲಿವೆ. ಔದ್ಯೋಗಿಕ ಕ್ಷೇತ್ರದಲ್ಲಿ ತಲೆದೋರುವ ಸಮಸ್ಯೆಗಳು ಕಾರ್ಯ ಕ್ಷಮತೆಯನ್ನು ಬಯಸುವುದು. ಹಣದ ಜೊತೆ ಜನಬಲವೂ ಅವಶ್ಯ .
21 ಆಗಸ್ಟ್ 2025, 18:32 IST
ಕರ್ಕಾಟಕ
ಹೆಚ್ಚಿನ ಎಲ್ಲಾ ಕೆಲಸಗಳು ಸಿಬ್ಬಂದಿ ವರ್ಗದವರ ಸಹಕಾರದಿಂದ ವ್ಯವಸ್ಥಿತವಾಗಿ ಕೈಗೂಡಲಿದೆ. ಹೋಟೆಲ್ ನಿರ್ವಾಹಕರಿಗೆ ಉತ್ತಮ ದಿನವಾಗಿರುತ್ತದೆ.
21 ಆಗಸ್ಟ್ 2025, 18:32 IST
ಸಿಂಹ
ಅನಾರೋಗ್ಯದ ಸ್ಥಿತಿಗೆ ವೈದ್ಯಕೀಯ ಮತ್ತು ಧಾರ್ಮಿಕ ಎರಡೂ ಸೇರಿದರೆ ಅನುಕೂಲವಿರುವುದು. ಹೆಚ್ಚಿನ ಪ್ರಯೋಜನವಿರುವುದಿಲ್ಲ. ಹೊಸಬರ ಪರಿಚಯ ವ್ಯವಹಾರಕ್ಕೆ ಅನುಕೂಲವೆನಿಸಲಿದೆ.
21 ಆಗಸ್ಟ್ 2025, 18:32 IST
ಕನ್ಯಾ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಬೇಜವಾಬ್ದಾರಿತನದಿಂದ ಉದ್ಯೋಗಕ್ಕೆ ಸಂಬಂಧಿಸಿದಂಥ ಯಂತ್ರಗಳ ಹಾನಿ ಉಂಟಾಗಬಹುದು.
21 ಆಗಸ್ಟ್ 2025, 18:32 IST
ತುಲಾ
ಜೀವನ ಸುಲಭವಾಗಿ ಸಾಗುವಂಥ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಿರಿ. ಆಫೀಸಿನ ಕೆಲಸದ ಮೇರೆಗೆ ವಿದೇಶ ಪ್ರಯಾಣ ಮಾಡಬೇಕಾಗಬಹುದು. ಟಿಂಬರ್ ವ್ಯಾಪಾರಿಗಳಿಗೆ ವರಮಾನ ಇರುವುದು.
21 ಆಗಸ್ಟ್ 2025, 18:32 IST
ವೃಶ್ಚಿಕ
ಮೇಲಧಿಕಾರಿಗಳು ನಿಮ್ಮನ್ನು ಪರೀಕ್ಷಿಸುವ ಕಾರಣವಾಗಿ ಜವಾಬ್ದಾರಿ ನಿಮಗೊಪ್ಪಿಸಲಿದ್ದಾರೆ. ಉತ್ತೀರ್ಣರಾಗುವುದು ಪ್ರಯತ್ನದ ಫಲವಾಗಿರುತ್ತದೆ. ಬಿಳಿ ಬಣ್ಣ ಶುಭ ತರಲಿದೆ.
21 ಆಗಸ್ಟ್ 2025, 18:32 IST
ಧನು
ವಸ್ತುವನ್ನು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರಾಟ ಮಾಡುವುದು ಲಾಭದ ಜೊತೆ ಸಂತೋಷ ತರುವುದು. ಸ್ನೇಹ ಸಂಬಂಧಗಳಿಗೆ ಪ್ರಾಮುಖ್ಯತೆ ಸಿಕ್ಕಿ, ಜೀವನ ಭದ್ರವಾಗಿರುತ್ತದೆ.
21 ಆಗಸ್ಟ್ 2025, 18:32 IST
ಮಕರ
ಸುಖಗಳ ಮೇಲಿನ ಮೋಹವನ್ನು ಬಿಟ್ಟು ಆಂತರಿಕ ಸಂತೋಷ ಹುಡುಕಿ. ಇಷ್ಟು ದಿನದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹತ್ತಿ ವ್ಯಾಪಾರಿಗಳು ಉತ್ತಮ ಗಳಿಕೆಯನ್ನು ನಿರೀಕ್ಷಿಸಬಹುದು.
21 ಆಗಸ್ಟ್ 2025, 18:32 IST
ಕುಂಭ
ಕಚೇರಿಯಲ್ಲಿನ ಕೆಲಸದ ಒತ್ತಡಗಳಿಗೆ ಇನ್ನೊಬ್ಬರನ್ನು ಹೊಣೆ ಮಾಡಬೇಡಿ. ಕಾರ್ಯಸಾಧನೆಗೆ ಕಳೆದುಕೊಂಡ ಸ್ನೇಹಿತನ ಸಹಾಯ ಅಗತ್ಯವೆನ್ನಿಸುವುದು. ಕೃಷಿ ಪದಾರ್ಥದ ದಲ್ಲಾಳಿಗೆ ನಷ್ಟವಾಗಬಹುದು.
21 ಆಗಸ್ಟ್ 2025, 18:32 IST
ಮೀನ
ಸಾಹಿತ್ಯಾಸಕ್ತರ ವಲಯದಲ್ಲಿ ಗಂಭೀರ ಚರ್ಚೆ ನಡೆಸಿ ಪಾಂಡಿತ್ಯ ಪ್ರದರ್ಶನ ಆಗಲಿದೆ. ಆರ್ಥಿಕ ಶಕ್ತಿಯನ್ನು ಅರಿತುಕೊಂಡು ಕನಸಿನ ಯೋಜನೆಗಳಿಗೆ ಸ್ಪಷ್ಟ ರೂಪ ನೀಡುವುದು ಸರಿಯಾದ ಮಾರ್ಗ.
21 ಆಗಸ್ಟ್ 2025, 18:32 IST