<p><strong>ಬೆಂಗಳೂರೂ:</strong> ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕೃತ ಮಹಾಯೋಜನೆ–2015ರ ಪ್ರಕಾರ, ಹೊರ ವರ್ತುಲ ರಸ್ತೆಯಿಂದ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್ಆರ್) ಸಂಪರ್ಕಿಸುವ ರಸ್ತೆ ವಿಸ್ತರಣೆಗೆ ವೇಗ ನೀಡಲು ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸೂಚಿಸಿದರು.</p><p>ಮಹದೇವಪುರ, ದೊಡ್ಡನೆಕ್ಕುಂದಿ, ಪಟ್ಟಂದೂರು ಅಗ್ರಹಾರ ಹಾಗೂ ನಾಗೊಂಡನಹಳ್ಳಿ ಮಾರ್ಗವಾಗಿ ಪಿಆರ್ಆರ್ ಸಂಪರ್ಕಿಸುವ ಪ್ರಸ್ತಾಪಿತ 24 ಮೀಟರ್ ಅಗಲದ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಬೇಕು. ಸ್ವತ್ತುಗಳ ಮಾಹಿತಿಯನ್ನು ಪಡೆದುಕೊಂಡು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಹೇಳಿದರು.</p><p>ಸೀತಾರಾಂಪಾಳ್ಯ ಮೆಟ್ರೊ ನಿಲ್ದಾಣ ಸಮೀಪದಲ್ಲಿ ಕೆಐಎಡಿಬಿಯಿಂದ ಅಭಿವೃದ್ದಿಪಡಿಸಿರುವ ವಿಶೇಷ ವಲಯದಲ್ಲಿನ ಸ್ವತ್ತುಗಳ ಬಳಿ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಐಎಡಿಬಿಯೊಂದಿಗೆ ಸಮನ್ವಯಕ್ಕೆ ಸೂಚಿಸಿದರು. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಾರ್ಚ್ 10ರೊಳಗೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದರು.</p>.ಬೆಂಗಳೂರು| ಆಸ್ತಿ ಹರಾಜಿಗೆ ಬಾರದ ಬಿಡ್ದಾರರು: ಹರಾಜು ಪ್ರಕ್ರಿಯೆ ಮುಂದೂಡಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರೂ:</strong> ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕೃತ ಮಹಾಯೋಜನೆ–2015ರ ಪ್ರಕಾರ, ಹೊರ ವರ್ತುಲ ರಸ್ತೆಯಿಂದ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್ಆರ್) ಸಂಪರ್ಕಿಸುವ ರಸ್ತೆ ವಿಸ್ತರಣೆಗೆ ವೇಗ ನೀಡಲು ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸೂಚಿಸಿದರು.</p><p>ಮಹದೇವಪುರ, ದೊಡ್ಡನೆಕ್ಕುಂದಿ, ಪಟ್ಟಂದೂರು ಅಗ್ರಹಾರ ಹಾಗೂ ನಾಗೊಂಡನಹಳ್ಳಿ ಮಾರ್ಗವಾಗಿ ಪಿಆರ್ಆರ್ ಸಂಪರ್ಕಿಸುವ ಪ್ರಸ್ತಾಪಿತ 24 ಮೀಟರ್ ಅಗಲದ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಬೇಕು. ಸ್ವತ್ತುಗಳ ಮಾಹಿತಿಯನ್ನು ಪಡೆದುಕೊಂಡು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಹೇಳಿದರು.</p><p>ಸೀತಾರಾಂಪಾಳ್ಯ ಮೆಟ್ರೊ ನಿಲ್ದಾಣ ಸಮೀಪದಲ್ಲಿ ಕೆಐಎಡಿಬಿಯಿಂದ ಅಭಿವೃದ್ದಿಪಡಿಸಿರುವ ವಿಶೇಷ ವಲಯದಲ್ಲಿನ ಸ್ವತ್ತುಗಳ ಬಳಿ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಐಎಡಿಬಿಯೊಂದಿಗೆ ಸಮನ್ವಯಕ್ಕೆ ಸೂಚಿಸಿದರು. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಾರ್ಚ್ 10ರೊಳಗೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದರು.</p>.ಬೆಂಗಳೂರು| ಆಸ್ತಿ ಹರಾಜಿಗೆ ಬಾರದ ಬಿಡ್ದಾರರು: ಹರಾಜು ಪ್ರಕ್ರಿಯೆ ಮುಂದೂಡಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>