ಬಟ್ಲಹಳ್ಳಿ ಸಮೀಪದ ಮುಷ್ಟೂರು ಪಟ್ಟಣದ ಗುರುಮೂರ್ತಿ ಬಂಧಿತ ಆರೋಪಿ. ಈತ ಖಾಸಗಿ ಬಸ್ ಕ್ಲೀನರ್ ಆಗಿದ್ದಾನೆ. ಈ ಹಿಂದೆಯೂ ಎಟಿಎಂನಲ್ಲಿ ವ್ಯಕ್ತಿಯೊಬ್ಬರ ಕಾರ್ಡ್ ಕದ್ದು, ಹಣ ವಿತ್ ಡ್ರಾ ಮಾಡಿದ ಆರೋಪದ ಮೇರೆಗೆ ಬಂಧಿಸಲ್ಪಟ್ಟಿದ್ದ. ಜೈಲಿನಿಂದ ಹೊರಬಂದ ಎರಡೇ ದಿನಗಳಲ್ಲಿ ಮತ್ತೆ ಎಟಿಎಂ ಗಳಿಗೆ ಹಣ ವಿತ್ ಡ್ರಾ ಮಾಡಲು ಬರುವವರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ರಂಗಶಾಮಯ್ಯ ತಿಳಿಸಿದ್ದಾರೆ.