<p><strong>ಉಜಿರೆ</strong>: ಸಮಾಜದ ಹಿತಕ್ಕಾಗಿ ರಚಿಸಿದ ಸಾಹಿತ್ಯದಿಂದ ಸಂಘಟನೆ, ಪ್ರಗತಿಯ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಲೋಕಾಯುಕ್ತ ನಿವೃತ್ತ ಎಸ್ಪಿ ತುಮಕೂರಿನ ಕುಮಾರಸ್ವಾಮಿ ಹೇಳಿದರು.</p>.<p>ಉಜಿರೆ ಬಳಿಯ ಬಲಿಪ ರೆಸಾರ್ಟ್ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಬೆಳ್ತಂಗಡಿ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ತೆಂಕಣದಲ್ಲಿ ನುಡಿ ದಿಬ್ಬಣ’ ಪ್ರಥಮ ತಾಲ್ಲೂಕು ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೀಳು ಅಭಿರುಚಿಯಿಂದ, ಅಬ್ಬರದ ಪ್ರಚಾರಕ್ಕಾಗಿ ಸಾಹಿತ್ಯ ರಚನೆ ಮಾಡಬಾರದು. ಸಾಹಿತ್ಯದ ಮೂಲಕವೂ ದೇಶಪ್ರೇಮ, ಸಮಾಜದ ಸಂಘಟನೆ, ಪ್ರೀತಿ-ವಿಶ್ವಾಸ, ಪರೋಪಕಾರ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳ ಉದ್ದೀಪನ ಸಾಧ್ಯ ಎಂದರು.</p>.<p>ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಕುರಿತು ಮಾತನಾಡಿದ ದಿವಾಕರ ಹೆಗಡೆ ಕೆರೆಹೊಂಡ, ಯಕ್ಷಗಾನ ಜನಸಾಮಾನ್ಯರ ಬಯಲು ವಿಶ್ವವಿದ್ಯಾಲಯ ಎಂದು ಹೇಳಿದರು.</p>.<p>ಶಾಂತಾ ಜೆ.ಅಳದಂಗಡಿ ಅವರ ‘ಕಾವ್ಯಯಾನ’, ವಿನುತಾ ರಜತ್ ಗೌಡ ಅವರ ‘ಪ್ರತಿಬಿಂಬ’, ತಾಲ್ಲೂಕು ಸಾಹಿತ್ಯ ಕೂಟ ಸದಸ್ಯರ ‘ಮೊದಲ ಹೆಜ್ಜೆ’ ಕೃತಿಗಳನ್ನು ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಬಿಡುಗಡೆ ಮಾಡಿದರು.</p>.<p>ಅಶ್ವಿಜಾ ಶ್ರೀಧರ್, ಆಶಾ ಆಡೂರು, ಅರುಣಾ ಶ್ರೀನಿವಾಸ್, ನಿಶಾ ಸಂತೋಷ್, ನಯನಾ, ವನಜಾ ಜೋಶಿ, ಸಮ್ಯಕ್ ಜೈನ್, ವಿದ್ಯಾಶ್ರೀ ಅಡೂರು, ನಾಗಶ್ರೀ ದಾತೆ, ಸೋನಾಕ್ಷಿ ಮತ್ತು ವೃಂದಾ ತಾಮಣ್ಕರ್ ಸ್ವರಚಿತ ಕವನಗಳನ್ನು ವಾಚಿಸಿದರು.</p>.<p>ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಬೆಳ್ತಂಗಡಿ ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರೊ.ಗಣಪತಿಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು.</p>.<p>ಲೇಖಕ ಶಿವಪ್ರಸಾದ್ ಸುರ್ಯ ಸಮಾರೋಪ ಭಾಷಣ ಮಾಡಿದರು.</p>.<p>ಸುಭಾಷಿಣಿ ಆಶಯ ಗೀತೆ ಹಾಡಿದರು. ಎಸ್ಡಿಎಂ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಧರ ಭಟ್ ಸ್ವಾಗತಿಸಿದರು. ಸುಭಾಷಿಣಿ ವಂದಿಸಿದರು. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಜಿರೆ</strong>: ಸಮಾಜದ ಹಿತಕ್ಕಾಗಿ ರಚಿಸಿದ ಸಾಹಿತ್ಯದಿಂದ ಸಂಘಟನೆ, ಪ್ರಗತಿಯ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಲೋಕಾಯುಕ್ತ ನಿವೃತ್ತ ಎಸ್ಪಿ ತುಮಕೂರಿನ ಕುಮಾರಸ್ವಾಮಿ ಹೇಳಿದರು.</p>.<p>ಉಜಿರೆ ಬಳಿಯ ಬಲಿಪ ರೆಸಾರ್ಟ್ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಬೆಳ್ತಂಗಡಿ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ತೆಂಕಣದಲ್ಲಿ ನುಡಿ ದಿಬ್ಬಣ’ ಪ್ರಥಮ ತಾಲ್ಲೂಕು ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೀಳು ಅಭಿರುಚಿಯಿಂದ, ಅಬ್ಬರದ ಪ್ರಚಾರಕ್ಕಾಗಿ ಸಾಹಿತ್ಯ ರಚನೆ ಮಾಡಬಾರದು. ಸಾಹಿತ್ಯದ ಮೂಲಕವೂ ದೇಶಪ್ರೇಮ, ಸಮಾಜದ ಸಂಘಟನೆ, ಪ್ರೀತಿ-ವಿಶ್ವಾಸ, ಪರೋಪಕಾರ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳ ಉದ್ದೀಪನ ಸಾಧ್ಯ ಎಂದರು.</p>.<p>ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಕುರಿತು ಮಾತನಾಡಿದ ದಿವಾಕರ ಹೆಗಡೆ ಕೆರೆಹೊಂಡ, ಯಕ್ಷಗಾನ ಜನಸಾಮಾನ್ಯರ ಬಯಲು ವಿಶ್ವವಿದ್ಯಾಲಯ ಎಂದು ಹೇಳಿದರು.</p>.<p>ಶಾಂತಾ ಜೆ.ಅಳದಂಗಡಿ ಅವರ ‘ಕಾವ್ಯಯಾನ’, ವಿನುತಾ ರಜತ್ ಗೌಡ ಅವರ ‘ಪ್ರತಿಬಿಂಬ’, ತಾಲ್ಲೂಕು ಸಾಹಿತ್ಯ ಕೂಟ ಸದಸ್ಯರ ‘ಮೊದಲ ಹೆಜ್ಜೆ’ ಕೃತಿಗಳನ್ನು ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಬಿಡುಗಡೆ ಮಾಡಿದರು.</p>.<p>ಅಶ್ವಿಜಾ ಶ್ರೀಧರ್, ಆಶಾ ಆಡೂರು, ಅರುಣಾ ಶ್ರೀನಿವಾಸ್, ನಿಶಾ ಸಂತೋಷ್, ನಯನಾ, ವನಜಾ ಜೋಶಿ, ಸಮ್ಯಕ್ ಜೈನ್, ವಿದ್ಯಾಶ್ರೀ ಅಡೂರು, ನಾಗಶ್ರೀ ದಾತೆ, ಸೋನಾಕ್ಷಿ ಮತ್ತು ವೃಂದಾ ತಾಮಣ್ಕರ್ ಸ್ವರಚಿತ ಕವನಗಳನ್ನು ವಾಚಿಸಿದರು.</p>.<p>ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಬೆಳ್ತಂಗಡಿ ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರೊ.ಗಣಪತಿಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು.</p>.<p>ಲೇಖಕ ಶಿವಪ್ರಸಾದ್ ಸುರ್ಯ ಸಮಾರೋಪ ಭಾಷಣ ಮಾಡಿದರು.</p>.<p>ಸುಭಾಷಿಣಿ ಆಶಯ ಗೀತೆ ಹಾಡಿದರು. ಎಸ್ಡಿಎಂ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಧರ ಭಟ್ ಸ್ವಾಗತಿಸಿದರು. ಸುಭಾಷಿಣಿ ವಂದಿಸಿದರು. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>