<p><strong>ಗಂಗಾವತಿ (ಕೊಪ್ಪಳ ಜಿಲ್ಲೆ):</strong> ಇಲ್ಲಿನ ವಾರ್ಡ್ ಸಂಖ್ಯೆ 28ರ ವ್ಯಾಪ್ತಿಯ ಬಸ್ ಡಿಪೋ ರಸ್ತೆಯಲ್ಲಿನ ತಾತ ಕಿರಾಣಿ ಅಂಗಡಿ ಬಳಿಯ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ ಸ್ಫೋಟಗೊಂಡು ವಿದ್ಯುತ್ ಶಾರ್ಟ್ ಸರ್ಕಿಟ್ ಕೂಡ ಆಗಿದ್ದರಿಂದ ಐವರು ಮಹಿಳೆಯರು ಗಾಯಗೊಂಡಿದ್ದಾರೆ. ಅವರನ್ನು ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.</p><p>ಶ್ರುತಿ ಐಲಿ, ಭಾಗ್ಯಮ್ಮ, ಶೋಭಾ ಹಾಗೂ ಪ್ರೀತಿ ಗಾಯಗೊಂಡಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಸ್ಫೋಟದಿಂದ ಕೈ, ಕಾಲು, ಮುಖಗಳಿಗೆ ಸುಟ್ಟ ಗಾಯಗಳಾಗಿವೆ.</p><p>ಬೆಳಿಗ್ಗೆ ಮನೆಯಲ್ಲಿ ಸಿಲೆಂಡರ್ ಸೋರಿಕೆಯಾಗಿತ್ತು. ಮನೆಯಲ್ಲಿ ಹಚ್ಚಿದ ದೀಪದ ಬೆಂಕಿ ಆಕಸ್ಮಿಕವಾಗಿ ತಗುಲಿ ಸ್ಫೋಟಗೊಂಡಿದೆ. ಜೊತೆಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಕೂಡ ಸಂಭವಿಸಿದೆ.</p><p>ಶ್ರುತಿ ಎನ್ನುವ ಮಹಿಳೆ ಅಪಾಯಕ್ಕೆ ಸಿಲುಕಿದಾಗ ನೆರೆ ಮನೆಯ ಮಹಿಳೆಯರು ರಕ್ಷಿಸಲು ಮನೆಗೆ ನುಗ್ಗಿದ್ದು ಅವರಿಗೂ ಸಹ ಬೆಂಕಿ ತಗುಲಿದೆ. ಈ ಅವಘಡದಿಂದ ಮನೆಯಲ್ಲಿ ಬಟ್ಟೆ, ದವಸ, ಧಾನ್ಯ, ಪಿಠೋಪಕರಣಗಳು ಸೇರಿ ಅಸ್ತಿಗೆ ಹಾನಿಯಾಗಿದೆ. </p><p>ವಿಷಯ ತಿಳಿಯುತ್ತಿದ್ದಂತೆ ಮನೆಯ ಅಕ್ಕಪಕ್ಕದವರು ಆಂಬುಲೆನ್ಸ್ಗೆ ಕರೆ ಮಾಡಿ ಗಾಯಾಳುಗಳನ್ನು ಉಪವಿಭಾಗ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.</p><p>ಅಗ್ನಿಶಾಮಕದಳ ಸಿಬ್ಬಂದಿ ರಮೇಶ ಈಡಿಗೇರ, ಸುರೇಶ ಎಸ್. ಗೌಡ, ರಂಗನಾಥ, ನಗರಸಭೆ ಪರಿಸರ ಎಂಜಿನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕ ನಾಗರಾಜ, ನಗರಸಭೆ ಸದಸ್ಯ ಎಫ್. ರಾಘವೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ (ಕೊಪ್ಪಳ ಜಿಲ್ಲೆ):</strong> ಇಲ್ಲಿನ ವಾರ್ಡ್ ಸಂಖ್ಯೆ 28ರ ವ್ಯಾಪ್ತಿಯ ಬಸ್ ಡಿಪೋ ರಸ್ತೆಯಲ್ಲಿನ ತಾತ ಕಿರಾಣಿ ಅಂಗಡಿ ಬಳಿಯ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ ಸ್ಫೋಟಗೊಂಡು ವಿದ್ಯುತ್ ಶಾರ್ಟ್ ಸರ್ಕಿಟ್ ಕೂಡ ಆಗಿದ್ದರಿಂದ ಐವರು ಮಹಿಳೆಯರು ಗಾಯಗೊಂಡಿದ್ದಾರೆ. ಅವರನ್ನು ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.</p><p>ಶ್ರುತಿ ಐಲಿ, ಭಾಗ್ಯಮ್ಮ, ಶೋಭಾ ಹಾಗೂ ಪ್ರೀತಿ ಗಾಯಗೊಂಡಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಸ್ಫೋಟದಿಂದ ಕೈ, ಕಾಲು, ಮುಖಗಳಿಗೆ ಸುಟ್ಟ ಗಾಯಗಳಾಗಿವೆ.</p><p>ಬೆಳಿಗ್ಗೆ ಮನೆಯಲ್ಲಿ ಸಿಲೆಂಡರ್ ಸೋರಿಕೆಯಾಗಿತ್ತು. ಮನೆಯಲ್ಲಿ ಹಚ್ಚಿದ ದೀಪದ ಬೆಂಕಿ ಆಕಸ್ಮಿಕವಾಗಿ ತಗುಲಿ ಸ್ಫೋಟಗೊಂಡಿದೆ. ಜೊತೆಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಕೂಡ ಸಂಭವಿಸಿದೆ.</p><p>ಶ್ರುತಿ ಎನ್ನುವ ಮಹಿಳೆ ಅಪಾಯಕ್ಕೆ ಸಿಲುಕಿದಾಗ ನೆರೆ ಮನೆಯ ಮಹಿಳೆಯರು ರಕ್ಷಿಸಲು ಮನೆಗೆ ನುಗ್ಗಿದ್ದು ಅವರಿಗೂ ಸಹ ಬೆಂಕಿ ತಗುಲಿದೆ. ಈ ಅವಘಡದಿಂದ ಮನೆಯಲ್ಲಿ ಬಟ್ಟೆ, ದವಸ, ಧಾನ್ಯ, ಪಿಠೋಪಕರಣಗಳು ಸೇರಿ ಅಸ್ತಿಗೆ ಹಾನಿಯಾಗಿದೆ. </p><p>ವಿಷಯ ತಿಳಿಯುತ್ತಿದ್ದಂತೆ ಮನೆಯ ಅಕ್ಕಪಕ್ಕದವರು ಆಂಬುಲೆನ್ಸ್ಗೆ ಕರೆ ಮಾಡಿ ಗಾಯಾಳುಗಳನ್ನು ಉಪವಿಭಾಗ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.</p><p>ಅಗ್ನಿಶಾಮಕದಳ ಸಿಬ್ಬಂದಿ ರಮೇಶ ಈಡಿಗೇರ, ಸುರೇಶ ಎಸ್. ಗೌಡ, ರಂಗನಾಥ, ನಗರಸಭೆ ಪರಿಸರ ಎಂಜಿನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕ ನಾಗರಾಜ, ನಗರಸಭೆ ಸದಸ್ಯ ಎಫ್. ರಾಘವೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>