<p><strong>ಮಂಡ್ಯ:</strong> ‘ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆ ಕೊಂಡೊಯ್ದ ಮಹಾನ್ ಚೇತನ ವರ್ಧಮಾನ ಮಹಾವೀರ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.</p>.<p>ನಗರದ ಜೈನ ಬೀದಿಯಲ್ಲಿರುವ ಅನಂತನಾಥ ಸ್ವಾಮಿ ದೇವಾಲಯ (ದಿಗಂಬರ ದೇವಾಲಯ) ವತಿಯಿಂದ ಗುರುವಾರ ನಡೆದ ಮಹಾವೀರ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.</p>.<p>ಜಗತ್ತಿಗೆ ಅಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ. ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ 5 ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ (ಅನಾಸಕ್ತಿ), ಆಸ್ತೇಯ (ಕದಿಯದಿರುವುದು) ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.</p>.<p>ಅದ್ದೂರಿ ಮೆರವಣಿಗೆ:</p>.<p>ಮೆರವಣಿಗೆಯು ಮಂಡ್ಯ ನಗರದ ಪೇಟೆ ಬೀದಿ ಮೂಲಕ ನಂದಾ ವೃತ್ತ, ಮೈಸೂರು ರಸ್ತೆಯಲ್ಲಿ ಸಾಗಿ ಮೂಲಸ್ಥಾನ ದೇವಾಲಯಕ್ಕೆ ಮರಳಿತು. ಬ್ಯಾಂಡ್ ಸೆಟ್ ಮೆರವಣಿಗೆಯಲ್ಲಿ ಗಮನ ಸೆಳೆಯಿತು. </p>.<p>ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಜೈನ ಸಮುದಾಯದ ಅಧ್ಯಕ್ಷರಾದ ಶಾಂತಿ ಪ್ರಸಾದ್ ಜೈನ್, ರಾಕೇಶ್ ಜೈನ್ ಶ್ರೀಧರ್ ಜೈನ್, ಶಶಿಧರ್ ಜೈನ್, ಪದ್ಮನಾಭ ಜೈನ್ ಇನ್ನಿತರರು ಪಾಲ್ಗೊಂಡಿದ್ದರು. </p>.<blockquote>ಸತ್ಯ ಮತ್ತು ಅಹಿಂಸೆ ಬೋಧಿಸಿದ ಮಹಾವೀರ ಮಹಾವೀರ ಪುತ್ಥಳಿಗೆ ಗಣ್ಯರಿಂದ ಪುಷ್ಪ ನಮನ ಶಾಂತಿ, ಸಹಬಾಳ್ವೆಯೇ ಜೀವನ ಸಾರ </blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ‘ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆ ಕೊಂಡೊಯ್ದ ಮಹಾನ್ ಚೇತನ ವರ್ಧಮಾನ ಮಹಾವೀರ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.</p>.<p>ನಗರದ ಜೈನ ಬೀದಿಯಲ್ಲಿರುವ ಅನಂತನಾಥ ಸ್ವಾಮಿ ದೇವಾಲಯ (ದಿಗಂಬರ ದೇವಾಲಯ) ವತಿಯಿಂದ ಗುರುವಾರ ನಡೆದ ಮಹಾವೀರ ಜಯಂತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಾವೀರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.</p>.<p>ಜಗತ್ತಿಗೆ ಅಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ. ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ 5 ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ (ಅನಾಸಕ್ತಿ), ಆಸ್ತೇಯ (ಕದಿಯದಿರುವುದು) ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.</p>.<p>ಅದ್ದೂರಿ ಮೆರವಣಿಗೆ:</p>.<p>ಮೆರವಣಿಗೆಯು ಮಂಡ್ಯ ನಗರದ ಪೇಟೆ ಬೀದಿ ಮೂಲಕ ನಂದಾ ವೃತ್ತ, ಮೈಸೂರು ರಸ್ತೆಯಲ್ಲಿ ಸಾಗಿ ಮೂಲಸ್ಥಾನ ದೇವಾಲಯಕ್ಕೆ ಮರಳಿತು. ಬ್ಯಾಂಡ್ ಸೆಟ್ ಮೆರವಣಿಗೆಯಲ್ಲಿ ಗಮನ ಸೆಳೆಯಿತು. </p>.<p>ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಜೈನ ಸಮುದಾಯದ ಅಧ್ಯಕ್ಷರಾದ ಶಾಂತಿ ಪ್ರಸಾದ್ ಜೈನ್, ರಾಕೇಶ್ ಜೈನ್ ಶ್ರೀಧರ್ ಜೈನ್, ಶಶಿಧರ್ ಜೈನ್, ಪದ್ಮನಾಭ ಜೈನ್ ಇನ್ನಿತರರು ಪಾಲ್ಗೊಂಡಿದ್ದರು. </p>.<blockquote>ಸತ್ಯ ಮತ್ತು ಅಹಿಂಸೆ ಬೋಧಿಸಿದ ಮಹಾವೀರ ಮಹಾವೀರ ಪುತ್ಥಳಿಗೆ ಗಣ್ಯರಿಂದ ಪುಷ್ಪ ನಮನ ಶಾಂತಿ, ಸಹಬಾಳ್ವೆಯೇ ಜೀವನ ಸಾರ </blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>