<p><strong>ಬೇಗುಸರಾಯ್:</strong> 25 ವರ್ಷದ ಮಹಿಳೆ, ಆಕೆಯ ತಂದೆ ಹಾಗೂ ಸಹೋದರನನ್ನು ಮಾವನೇ ಗುಂಡಿಟ್ಟು ಕೊಲೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶನಿವಾರ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.</p><p>ಶೆಬ್ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷ್ಣುಪುರ ಅಹುಕ್ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದೆ. ನೀಲು ಕುಮಾರಿ, ಆಕೆಯ ತಂದೆ ಉಮೇಶ್ ಯಾದವ್ ಹಾಗೂ ಸಹೋದರ ರಾಜೇಶ್ ಯಾದವ್ ಮೃತರು.</p><p>ಇವರೆಲ್ಲರೂ ಬೇಗುಸರಾಯ್ನ ಶ್ರೀನಗರದ ನಿವಾಸಿಗಳು.</p>.ಬೈಲಹೊಂಗಲ | ಕಲ್ಲಿನಿಂದ ಜಜ್ಜಿ ಯುವಕನ ಕೊಲೆ.<p>‘ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಉಮೇಶ್ ಯಾದವ್ ತನ್ನ ಪುತ್ರನೊಂದಿಗೆ ಪುತ್ರಿಯ ಮಾವನ ಮನೆಯಲ್ಲಿ ಇದ್ದರು. ಇವರನ್ನು ಕಂಡಕೂಡಲೇ ಕೋಪಗೊಂಡಿದ್ದಲ್ಲದೇ ಗಲಾಟೆಯೂ ಆರಂಭವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಶೆಬ್ಪುರ ಕಮಲ್ ಪೊಲೀಸ್ ಠಾಣೆಯ ಎಸ್.ಎಸ್.ಒ. ದೀಪಕ್ ಕುಮಾರ್ ಹೇಳಿದ್ದಾರೆ.</p><p>ಈ ವೇಳೆ ನೀಲು ಕುಮಾರಿಯ ಮಾವ ಬಂದೂಕು ತೆಗೆದು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.ಹಾವೇರಿ | ಅತ್ತಿಗೆಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಅಣ್ಣನಿಂದ ತಮ್ಮನ ಕೊಲೆ. <p>‘ಇದೊಂದು ಬಲವಂತದ ಮದುವೆ ಪ್ರಕರಣವಾಗಿದ್ದು, ಮಹಿಳೆಯನ್ನು ಅಪಹರಿಸಿ ಮದುವೆ ಮಾಡಲಾಗಿತ್ತು. ಹೀಗಾಗಿ ಮಹಿಳೆಯ ಮಾವನ ಮನೆಯಲ್ಲಿ ಎಲ್ಲವೂ ಸರಿ ಇರಲಿಲ್ಲ’ ಎಂದು ಗ್ರಾಮದ ಮುಖ್ಯಸ್ಥ ಸುಬೋಧ್ ಕುಮಾರ್ ಯಾದವ್ ಹೇಳಿದ್ದಾರೆ.</p><p>ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.</p>.ದಾಯಾದಿ ಕಲಹ | ಹಗರಿಬೊಮ್ಮನಹಳ್ಳಿಯಲ್ಲಿ ಯುವಕನ ಕೊಲೆ: ಆರು ಮಂದಿ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಗುಸರಾಯ್:</strong> 25 ವರ್ಷದ ಮಹಿಳೆ, ಆಕೆಯ ತಂದೆ ಹಾಗೂ ಸಹೋದರನನ್ನು ಮಾವನೇ ಗುಂಡಿಟ್ಟು ಕೊಲೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶನಿವಾರ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.</p><p>ಶೆಬ್ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಷ್ಣುಪುರ ಅಹುಕ್ ಎನ್ನುವ ಗ್ರಾಮದಲ್ಲಿ ಘಟನೆ ನಡೆದಿದೆ. ನೀಲು ಕುಮಾರಿ, ಆಕೆಯ ತಂದೆ ಉಮೇಶ್ ಯಾದವ್ ಹಾಗೂ ಸಹೋದರ ರಾಜೇಶ್ ಯಾದವ್ ಮೃತರು.</p><p>ಇವರೆಲ್ಲರೂ ಬೇಗುಸರಾಯ್ನ ಶ್ರೀನಗರದ ನಿವಾಸಿಗಳು.</p>.ಬೈಲಹೊಂಗಲ | ಕಲ್ಲಿನಿಂದ ಜಜ್ಜಿ ಯುವಕನ ಕೊಲೆ.<p>‘ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಉಮೇಶ್ ಯಾದವ್ ತನ್ನ ಪುತ್ರನೊಂದಿಗೆ ಪುತ್ರಿಯ ಮಾವನ ಮನೆಯಲ್ಲಿ ಇದ್ದರು. ಇವರನ್ನು ಕಂಡಕೂಡಲೇ ಕೋಪಗೊಂಡಿದ್ದಲ್ಲದೇ ಗಲಾಟೆಯೂ ಆರಂಭವಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ’ ಎಂದು ಶೆಬ್ಪುರ ಕಮಲ್ ಪೊಲೀಸ್ ಠಾಣೆಯ ಎಸ್.ಎಸ್.ಒ. ದೀಪಕ್ ಕುಮಾರ್ ಹೇಳಿದ್ದಾರೆ.</p><p>ಈ ವೇಳೆ ನೀಲು ಕುಮಾರಿಯ ಮಾವ ಬಂದೂಕು ತೆಗೆದು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.</p>.ಹಾವೇರಿ | ಅತ್ತಿಗೆಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಅಣ್ಣನಿಂದ ತಮ್ಮನ ಕೊಲೆ. <p>‘ಇದೊಂದು ಬಲವಂತದ ಮದುವೆ ಪ್ರಕರಣವಾಗಿದ್ದು, ಮಹಿಳೆಯನ್ನು ಅಪಹರಿಸಿ ಮದುವೆ ಮಾಡಲಾಗಿತ್ತು. ಹೀಗಾಗಿ ಮಹಿಳೆಯ ಮಾವನ ಮನೆಯಲ್ಲಿ ಎಲ್ಲವೂ ಸರಿ ಇರಲಿಲ್ಲ’ ಎಂದು ಗ್ರಾಮದ ಮುಖ್ಯಸ್ಥ ಸುಬೋಧ್ ಕುಮಾರ್ ಯಾದವ್ ಹೇಳಿದ್ದಾರೆ.</p><p>ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.</p>.ದಾಯಾದಿ ಕಲಹ | ಹಗರಿಬೊಮ್ಮನಹಳ್ಳಿಯಲ್ಲಿ ಯುವಕನ ಕೊಲೆ: ಆರು ಮಂದಿ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>