‘ರಾಜ್ಯ ಪೊಲೀಸ್ ಘಟಕದ ಬಸ್ತರ್ ಫೈಟರ್ಸ್ಗೆ ಸೇರಿದ ಕಾನ್ಸ್ಟೆಬಲ್ ರಮೇಶ್ ಕುರೇತಿ ಎನ್ಕಂಟರ್ನಲ್ಲಿ ಮೃತಪಟ್ಟಿದ್ದಾರೆ. ನಕ್ಸಲ್ನ ಮೃತದೇಹ ದೊರೆತ ಸ್ಥಳದಲ್ಲಿ ಸಿಕ್ಕ ಎಕೆ–47 ರೈಫಲ್ ವಶಪಡಿಸಿಕೊಳ್ಳಲಾಗಿದೆ. ಹಿದೂರ್ ಅರಣ್ಯದಲ್ಲಿ ನಕ್ಸಲರಿರುವ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಶೋಧ ಮುಂದುವರಿದಿದೆ’ ಎಂದು ಅವರು ತಿಳಿಸಿದ್ದಾರೆ.