<p class="title"><strong>ನವದೆಹಲಿ: </strong>‘ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ಈ ಕುರಿತು ಸಂಸತ್ತು ಮತ್ತು ಸಾರ್ವತ್ರಿಕವಾಗಿ ಚರ್ಚೆ ಆಗಬೇಕಾಗಿದೆ’ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಶುಕ್ರವಾರ ಪ್ರತಿಪಾದಿಸಿದರು.</p>.<p class="title">ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ದೇಶವ್ಯಾಪಿ ಚರ್ಚೆಗೊಳಪಟ್ಟಿರುವ ಹೊತ್ತಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಹಿಜಾಬ್ ಕುರಿತ ಬೆಳವಣಿಗೆಗಳು ಕಳವಳಕಾರಿಯಾದುದು, ದೇಶದಲ್ಲಿ ಒಟ್ಟು ವಾತಾವರಣ ಹಾಳುಗೆಡಹುತ್ತಿದೆ’ ಎಂದು ಬಣ್ಣಿಸಿದರು.</p>.<p class="title"><a href="https://www.prajavani.net/karnataka-news/karnataka-high-court-interim-order-hijab-row-case-saffron-shawl-hijab-not-allowed-in-college-schools-909962.html" itemprop="url" target="_blank">ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧಾರಣೆಗೆ ನಿಷೇಧ: ಹೈಕೋರ್ಟ್ ಮಧ್ಯಂತರ ಆದೇಶ</a></p>.<p>‘ಕೆಲ ಮತ ಮಧ್ಯಸ್ಥಿಕೆದಾರರು ಇದ್ದಾರೆ. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ (ಹಿಜಾಬ್) ಅತಾರ್ಕಿಕವಾದ ಬೇಡಿಕೆಗಳನ್ನು ಬೆಂಬಲಿಸುತ್ತಿದ್ದಾರೆ. ಇಂಥವರು ಮತಕ್ಕಾಗಿ ಅಮಾಯಕ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ರಸ್ತೆಗಳಿಂದ ಸಂಸತ್ತಿನವರೆಗೆ ಈ ಬಗ್ಗೆ ಚರ್ಚೆ ಆಗಬೇಕಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>‘ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ಈ ಕುರಿತು ಸಂಸತ್ತು ಮತ್ತು ಸಾರ್ವತ್ರಿಕವಾಗಿ ಚರ್ಚೆ ಆಗಬೇಕಾಗಿದೆ’ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಶುಕ್ರವಾರ ಪ್ರತಿಪಾದಿಸಿದರು.</p>.<p class="title">ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ದೇಶವ್ಯಾಪಿ ಚರ್ಚೆಗೊಳಪಟ್ಟಿರುವ ಹೊತ್ತಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಹಿಜಾಬ್ ಕುರಿತ ಬೆಳವಣಿಗೆಗಳು ಕಳವಳಕಾರಿಯಾದುದು, ದೇಶದಲ್ಲಿ ಒಟ್ಟು ವಾತಾವರಣ ಹಾಳುಗೆಡಹುತ್ತಿದೆ’ ಎಂದು ಬಣ್ಣಿಸಿದರು.</p>.<p class="title"><a href="https://www.prajavani.net/karnataka-news/karnataka-high-court-interim-order-hijab-row-case-saffron-shawl-hijab-not-allowed-in-college-schools-909962.html" itemprop="url" target="_blank">ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧಾರಣೆಗೆ ನಿಷೇಧ: ಹೈಕೋರ್ಟ್ ಮಧ್ಯಂತರ ಆದೇಶ</a></p>.<p>‘ಕೆಲ ಮತ ಮಧ್ಯಸ್ಥಿಕೆದಾರರು ಇದ್ದಾರೆ. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ (ಹಿಜಾಬ್) ಅತಾರ್ಕಿಕವಾದ ಬೇಡಿಕೆಗಳನ್ನು ಬೆಂಬಲಿಸುತ್ತಿದ್ದಾರೆ. ಇಂಥವರು ಮತಕ್ಕಾಗಿ ಅಮಾಯಕ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಈ ಹೊತ್ತಿನ ಅಗತ್ಯವಾಗಿದೆ. ರಸ್ತೆಗಳಿಂದ ಸಂಸತ್ತಿನವರೆಗೆ ಈ ಬಗ್ಗೆ ಚರ್ಚೆ ಆಗಬೇಕಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>