ಭಯೋತ್ಪಾದಕರ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರೀತಿಪಾತ್ರರನ್ನು ಕಳೆದು ಕೊಂಡವರಿಗೆ ನನ್ನ ಸಂತಾಪಗಳು, ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಹೀನ ಕೃತ್ಯದ ಹಿಂದಿರುವವರಿಗೆ ಶಿಕ್ಷೆಯಾಗುತ್ತದೆ... ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ದೃಢಸಂಕಲ್ಪ ಇನ್ನಷ್ಟು ಬಲವಾಗುತ್ತದೆ
ನರೇಂದ್ರ ಮೋದಿ, ಪ್ರಧಾನಿ
ಪ್ರವಾಸಿಗರ ಮೇಲಿನ ದಾಳಿ ಆಕ್ರೋಶ ಮೂಡಿಸಿದೆ. ಮೃತರ ಕುಟುಂಬದ ಸದಸ್ಯರಿಗೆ ಸಂತಾಪಗಳು. ಈ ದಾಳಿಯಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ. ಅವರು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ
ಅಮಿತ್ ಶಾ, ಕೇಂದ್ರ ಗೃಹ ಸಚಿವ
ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯು ಆಘಾತಕಾರಿ, ನೋವಿನ ಸಂಗತಿ. ಅಮಾಯಕರ ಮೇಲಿನ ಅಮಾನವೀಯ ದಾಳಿಗೆ ಕ್ಷಮೆ ಇಲ್ಲ
ದ್ರೌಪದಿ ಮುರ್ಮು, ರಾಷ್ಟ್ರಪತಿ
ನಮ್ಮ ಪ್ರವಾಸಿಗರ ಮೇಲಿನ ದಾಳಿಯು ಒಂದು ದೌರ್ಜನ್ಯ. ದಾಳಿ ನಡೆಸಿದವರು ಮೃಗಗಳು, ಅವರು ಮನುಷ್ಯರಲ್ಲ, ಅವರು ಖಂಡನಾರ್ಹರು. ಯಾವ ಪದ ಬಳಸಿ ಖಂಡಿಸಿದರೂ ಸಾಕಾಗದು. ಮೃತರ ಕುಟುಂಬಗಳಿಗೆ ನನ್ನ ಸಹಾನುಭೂತಿ ಇದೆ