ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ರಫ್ತು ನಿಷೇಧ: ರೈತರ ಪ್ರತಿಭಟನೆ

Published 8 ಡಿಸೆಂಬರ್ 2023, 16:10 IST
Last Updated 8 ಡಿಸೆಂಬರ್ 2023, 16:10 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕೇಂದ್ರ ಸರ್ಕಾರವು ಈರುಳ್ಳಿ ರಫ್ತನ್ನು ನಿಷೇಧಿಸಿರುವುದನ್ನು ವಿರೋಧಿಸಿ ನಾಸಿಕ್‌ ಜಿಲ್ಲೆಯ ಮಹಾರಾಷ್ಟ್ರ– ಆಗ್ರಾ ಹೆದ್ದಾರಿಯ ಮೂರು ಸ್ಥಳಗಳಲ್ಲಿ ನೂರಾರು ರೈತರು ಶುಕ್ರವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

‘ನಾಸಿಕ್‌ ಜಿಲ್ಲೆಯ ಲಾಸಲ್‌ಗಾಂವ್‌, ನಂದಗಾಂವ್‌, ಪಿಂಪಲ್‌ಗಾಂವ್‌ ಹಾಗೂ ಉಮರಾನೆಯ ಈರುಳ್ಳಿ ಮಾರುಕಟ್ಟೆಗಳಲ್ಲಿ ಕಳೆದ 4–5 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

‘ಮಹಾರಾಷ್ಟ್ರ– ಆಗ್ರಾ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ರೈತರು ರಸ್ತೆ ತಡೆ ನಡೆಸಿದ್ದಾರೆ. ಜೈಖೇಡಾ, ಚಂದ್ವಾಡ್‌, ಮುಂಗ್ಸೆ ಹಾಗೂ ಮಾಲೆಗಾಂವ್‌ನಲ್ಲೂ ರಸ್ತೆ ತಡೆ ನಡೆದಿವೆ’ ಎಂದರು.

‘ನಾಸಿಕ್‌ ಪೊಲೀಸರ ಮನವಿ ಮೇರೆಗೆ ರೈತರು ತಮ್ಮ ಪ್ರತಿಭಟನೆ ನಿಲ್ಲಿಸಿ, ಶಾಂತಿಯುತವಾಗಿ ಚದುರಿದ್ದಾರೆ. ಅವರ ಮೇಲೆ ಯಾವುದೇ ರೀತಿಯ ಬಲಪ್ರಯೋಗ ಮಾಡಿಲ್ಲ’ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT