‘ರೈತರ ಬೆಳೆಗೆ ಅವುಗಳಿಗೆ ಆಗುವ ವೆಚ್ಚದ ಆಧಾರದಲ್ಲಿ ಸೂಕ್ತ ಬೆಲೆ ಸಿಗಬೇಕು, ಕೃಷಿ ಚಟುವಟಿಕೆಗಳಲ್ಲಿ ಬಳಸುವ ಬೀಜ, ರಸಗೊಬ್ಬರದಂತಹ ಉತ್ಪನ್ನಗಳಿಗೆ ಜಿಎಸ್ಟಿ ಇರಬಾರದು, ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ಹೆಚ್ಚಿಸಬೇಕು, ಕುಲಾಂತರಿ ಬೀಜಗಳಿಗೆ ಅವಕಾಶ ಇರಕೂಡದು ಎಂಬುದು ನಮ್ಮ ಬೇಡಿಕೆ’ ಎಂದು ಬಿಕೆಎಸ್ ಹೇಳಿದೆ.