<p><strong>ವಯನಾಡ್(ಕೇರಳ):</strong> ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೂರು ದಿನಗಳ ತಮ್ಮ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಇಂದು (ಗುರುವಾರ) ವಯನಾಡ್ಗೆ ಆಗಮಿಸಿದ್ದಾರೆ.</p><p>ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ, ವಯನಾಡಿಗೆ ಪ್ರಯಾಣ ಬೆಳೆಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.</p><p>ಪ್ರಿಯಾಂಕಾ ಅವರು ಪುಲ್ಪಳ್ಳಿಯ ಶ್ರೀ ಸೀತಾ ದೇವಿ ಲವ ಕುಶ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಕ್ಷೇತ್ರ ಭೇಟಿ ಆರಂಭಿಸಲಿದ್ದಾರೆ. ಬಳಿಕ ಸುಲ್ತಾನ್ ಬತ್ತೇರಿಯ ಪುಲ್ಪಲ್ಲಿ ಗ್ರಾಮ ಪಂಚಾಯತ್ನಲ್ಲಿ ಹೊಸ ಗ್ರಾಮ ಪಂಚಾಯತ್ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.</p><p>ಸುಲ್ತಾನ್ ಬತ್ತೇರಿಯ ಮೀನಂಗಡಿಯಲ್ಲಿರುವ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ‘ವನಿತಾ ಸಂಗಮ’ವನ್ನು ಉದ್ಘಾಟಿಸಲಿದ್ದಾರೆ.</p><p>ಮಧ್ಯಾಹ್ನ 2.30ಕ್ಕೆ ಕಲ್ಪೆಟ್ಟಾದ ಡಬ್ಯುಎಂಒ ಮುಟ್ಟಿಲ್ನಲ್ಲಿ ‘ಒಂದು ಶಾಲೆ, ಒಂದು ಆಟ’ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.</p><p>ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲದಲ್ಲಿ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ಉದ್ಧೇಶಿತ ಟೌನ್ಶಿಪ್ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಸಂಜೆ 5.15ಕ್ಕೆ ಮಾನಂತವಾಡಿಯ ವಲ್ಲಿಯೂರ್ಕಾವು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಯನಾಡ್(ಕೇರಳ):</strong> ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೂರು ದಿನಗಳ ತಮ್ಮ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ಇಂದು (ಗುರುವಾರ) ವಯನಾಡ್ಗೆ ಆಗಮಿಸಿದ್ದಾರೆ.</p><p>ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಿಯಾಂಕಾ, ವಯನಾಡಿಗೆ ಪ್ರಯಾಣ ಬೆಳೆಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.</p><p>ಪ್ರಿಯಾಂಕಾ ಅವರು ಪುಲ್ಪಳ್ಳಿಯ ಶ್ರೀ ಸೀತಾ ದೇವಿ ಲವ ಕುಶ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಕ್ಷೇತ್ರ ಭೇಟಿ ಆರಂಭಿಸಲಿದ್ದಾರೆ. ಬಳಿಕ ಸುಲ್ತಾನ್ ಬತ್ತೇರಿಯ ಪುಲ್ಪಲ್ಲಿ ಗ್ರಾಮ ಪಂಚಾಯತ್ನಲ್ಲಿ ಹೊಸ ಗ್ರಾಮ ಪಂಚಾಯತ್ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ.</p><p>ಸುಲ್ತಾನ್ ಬತ್ತೇರಿಯ ಮೀನಂಗಡಿಯಲ್ಲಿರುವ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ‘ವನಿತಾ ಸಂಗಮ’ವನ್ನು ಉದ್ಘಾಟಿಸಲಿದ್ದಾರೆ.</p><p>ಮಧ್ಯಾಹ್ನ 2.30ಕ್ಕೆ ಕಲ್ಪೆಟ್ಟಾದ ಡಬ್ಯುಎಂಒ ಮುಟ್ಟಿಲ್ನಲ್ಲಿ ‘ಒಂದು ಶಾಲೆ, ಒಂದು ಆಟ’ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.</p><p>ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲದಲ್ಲಿ ಭೂಕುಸಿತದಲ್ಲಿ ಬದುಕುಳಿದವರಿಗಾಗಿ ಉದ್ಧೇಶಿತ ಟೌನ್ಶಿಪ್ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಸಂಜೆ 5.15ಕ್ಕೆ ಮಾನಂತವಾಡಿಯ ವಲ್ಲಿಯೂರ್ಕಾವು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>