<p><strong>ಲಖನೌ</strong>: ಉತ್ತರ ಪ್ರದೇಶದ ಸಂಭಲ್ ಲೋಕಸಭಾ ಕ್ಷೇತ್ರದ ಸಂಸದ, ಸಮಾಜವಾದಿ ಪಕ್ಷದ ಜಿಯಾ ಉರ್ ರೆಹಮಾನ್ ಬರ್ಕ್ ಅವರಿಗೆ ವಿದ್ಯುತ್ ಇಲಾಖೆಯು ಶುಕ್ರವಾರ ₹1.91 ಕೋಟಿ ದಂಡ ವಿಧಿಸಿದೆ. ಅವರ ಮನೆಯ ವಿದ್ಯುತ್ ಸಂಪರ್ಕವನ್ನೂ ಸ್ಥಗಿತಗೊಳಿಸಿದೆ. </p>.<p>ವಿದ್ಯುತ್ ಇಲಾಖೆಯ ಸಿಬ್ಬಂದಿ ಎರಡು ದಿನಗಳ ಹಿಂದೆ ಜಿಯಾ ಉರ್ ರೆಹಮಾನ್ ಅವರ ಮನೆಯಲ್ಲಿ ಶೋಧ ನಡೆಸಿ, ಮೀಟರ್ ಇಲ್ಲದ ವಿದ್ಯುತ್ ಸಂಪರ್ಕಗಳನ್ನು ಪತ್ತೆ ಮಾಡಿದ್ದರು. </p>.<p>‘ಅವರ ಮನೆಯ ವಿದ್ಯುತ್ ಬಿಲ್ ಹಲವು ತಿಂಗಳುಗಳಿಂದ ಶೂನ್ಯ ಎಂದು ತೋರಿಸುತ್ತಿತ್ತು. ಮನೆಯ ಎರಡು ಸಂಪರ್ಕಗಳಿಗೆ ಒಂದು ವರ್ಷದಲ್ಲಿ ಕೇವಲ ₹14 ಸಾವಿರ ಬಿಲ್ ಮಾತ್ರ ಬಂದಿದೆ’ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ತಂದೆ ವಿರುದ್ಧ ಪ್ರಕರಣ:</strong> ವಿದ್ಯುತ್ ಇಲಾಖೆಯ ಸಿಬ್ಬಂದಿ ಶೋಧ ನಡೆಸಲು ಮನೆಗೆ ಬಂದಾಗ ಸಂಸದರ ತಂದೆ ಹಾಗೂ ಇತರ ಇಬ್ಬರು ಅವರಿಗೆ ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲ, ‘ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಒತ್ತುವರಿ ತೆರವು:</strong> ದೀಪಾ ಸರಾಯ್ ಪ್ರದೇಶದಲ್ಲಿರುವ ಜಿಯಾ ಉರ್ ರೆಹಮಾನ್ ಅವರ ಮನೆಯ ಮೆಟ್ಟಿಲುಗಳನ್ನು ಅಧಿಕಾರಿಗಳು ಶುಕ್ರವಾರ ಬುಲ್ಡೋಜರ್ ಬಳಸಿ ತೆರವುಗೊಳಿಸಿದರು. ಮೆಟ್ಟಿಲುಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವುದು ಕಂಡುಬಂದ ಕಾರಣ ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಉತ್ತರ ಪ್ರದೇಶದ ಸಂಭಲ್ ಲೋಕಸಭಾ ಕ್ಷೇತ್ರದ ಸಂಸದ, ಸಮಾಜವಾದಿ ಪಕ್ಷದ ಜಿಯಾ ಉರ್ ರೆಹಮಾನ್ ಬರ್ಕ್ ಅವರಿಗೆ ವಿದ್ಯುತ್ ಇಲಾಖೆಯು ಶುಕ್ರವಾರ ₹1.91 ಕೋಟಿ ದಂಡ ವಿಧಿಸಿದೆ. ಅವರ ಮನೆಯ ವಿದ್ಯುತ್ ಸಂಪರ್ಕವನ್ನೂ ಸ್ಥಗಿತಗೊಳಿಸಿದೆ. </p>.<p>ವಿದ್ಯುತ್ ಇಲಾಖೆಯ ಸಿಬ್ಬಂದಿ ಎರಡು ದಿನಗಳ ಹಿಂದೆ ಜಿಯಾ ಉರ್ ರೆಹಮಾನ್ ಅವರ ಮನೆಯಲ್ಲಿ ಶೋಧ ನಡೆಸಿ, ಮೀಟರ್ ಇಲ್ಲದ ವಿದ್ಯುತ್ ಸಂಪರ್ಕಗಳನ್ನು ಪತ್ತೆ ಮಾಡಿದ್ದರು. </p>.<p>‘ಅವರ ಮನೆಯ ವಿದ್ಯುತ್ ಬಿಲ್ ಹಲವು ತಿಂಗಳುಗಳಿಂದ ಶೂನ್ಯ ಎಂದು ತೋರಿಸುತ್ತಿತ್ತು. ಮನೆಯ ಎರಡು ಸಂಪರ್ಕಗಳಿಗೆ ಒಂದು ವರ್ಷದಲ್ಲಿ ಕೇವಲ ₹14 ಸಾವಿರ ಬಿಲ್ ಮಾತ್ರ ಬಂದಿದೆ’ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ತಂದೆ ವಿರುದ್ಧ ಪ್ರಕರಣ:</strong> ವಿದ್ಯುತ್ ಇಲಾಖೆಯ ಸಿಬ್ಬಂದಿ ಶೋಧ ನಡೆಸಲು ಮನೆಗೆ ಬಂದಾಗ ಸಂಸದರ ತಂದೆ ಹಾಗೂ ಇತರ ಇಬ್ಬರು ಅವರಿಗೆ ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲ, ‘ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಒತ್ತುವರಿ ತೆರವು:</strong> ದೀಪಾ ಸರಾಯ್ ಪ್ರದೇಶದಲ್ಲಿರುವ ಜಿಯಾ ಉರ್ ರೆಹಮಾನ್ ಅವರ ಮನೆಯ ಮೆಟ್ಟಿಲುಗಳನ್ನು ಅಧಿಕಾರಿಗಳು ಶುಕ್ರವಾರ ಬುಲ್ಡೋಜರ್ ಬಳಸಿ ತೆರವುಗೊಳಿಸಿದರು. ಮೆಟ್ಟಿಲುಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವುದು ಕಂಡುಬಂದ ಕಾರಣ ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>