‘ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ–ಸಾಹಸದ ಪ್ರತೀಕದಂತಿದ್ದ ಕಹಳೆ, ದೆಹಲಿ ದೊರೆಗಳ ಸದ್ದಡಗಿಸಿತ್ತು. ‘ಕಹಳೆ ಊದುತ್ತಿರುವ ಮನುಷ್ಯ’ ಚಿಹ್ನೆಯನ್ನು ಕೊಟ್ಟಿರುವುದು ಪಕ್ಷದ ಪಾಲಿಗೆ ದೊಡ್ಡ ಗೌರವ. ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಸಂಕೇತವೂ ಆಗಿದೆ. ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿರುವವರನ್ನು ಅಧಿಕಾರದಿಂದ ಕೆಳಗಿಳಿಸಲು ಶರದ್ ಪವಾರ್ ನಾಯಕತ್ವದಲ್ಲಿ ಕಹಳೆ ಮೊಳಗಲಿದೆ’ ಎಂದೂ ಪೋಸ್ಟ್ ಮಾಡಿದೆ.