<p><strong>ಕೋಲ್ಕತ್ತ</strong>: ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್ಐಆರ್) ಹಾವಿನ ಹುತ್ತದೊಳಗೆ ಕಾರ್ಬಾಲಿಕ್ ಆಮ್ಲ ಸುರಿದಂತೆ ಎಂದು ಹೋಲಿಕೆ ಮಾಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ‘ಇದು ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ನುಸುಳುಕೋರರನ್ನು ಹೊರೆಗೆಳೆಯುವ ಪ್ರಕ್ರಿಯೆ’ ಎಂದು ಭಾನುವಾರ ಹೇಳಿದ್ದಾರೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಡಳಿತಾರೂಢ ಟಿಎಂಸಿ ನೆರವಿನಿಂದ ನುಸುಳುಕೋರರು ರಾಜ್ಯದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಗಡಿಪಾರು ಮಾಡಲಾಗುವುದು’ ಎಂದು ಹೇಳಿದ್ದಾರೆ.</p>.<p>‘ಹುತ್ತದೊಳಗೆ ಕಾರ್ಬಾಲಿಕ್ ಆಮ್ಲ ಸುರಿದಾಗ ಹಾವುಗಳು ಹೊರಬರುತ್ತವೆ. ಅವುಗಳನ್ನು ಹಿಡಿದು ಹೊರಗೆ ಎಸೆಯಲಾಗುತ್ತದೆ. ಚುನಾವಣಾ ಆಯೋಗವು ನುಸುಳುಕೋರರ ಸಮಸ್ಯೆಗೆ ‘ಎಸ್ಐಆರ್’ ಎಂಬ ಸೂಕ್ತ ಔಷಧಿ ಬಳಕೆ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಅಧಿಕಾರಿ ಹೇಳಿದ್ದಾರೆ.</p>
<p><strong>ಕೋಲ್ಕತ್ತ</strong>: ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್ಐಆರ್) ಹಾವಿನ ಹುತ್ತದೊಳಗೆ ಕಾರ್ಬಾಲಿಕ್ ಆಮ್ಲ ಸುರಿದಂತೆ ಎಂದು ಹೋಲಿಕೆ ಮಾಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ‘ಇದು ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ನುಸುಳುಕೋರರನ್ನು ಹೊರೆಗೆಳೆಯುವ ಪ್ರಕ್ರಿಯೆ’ ಎಂದು ಭಾನುವಾರ ಹೇಳಿದ್ದಾರೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಡಳಿತಾರೂಢ ಟಿಎಂಸಿ ನೆರವಿನಿಂದ ನುಸುಳುಕೋರರು ರಾಜ್ಯದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಗಡಿಪಾರು ಮಾಡಲಾಗುವುದು’ ಎಂದು ಹೇಳಿದ್ದಾರೆ.</p>.<p>‘ಹುತ್ತದೊಳಗೆ ಕಾರ್ಬಾಲಿಕ್ ಆಮ್ಲ ಸುರಿದಾಗ ಹಾವುಗಳು ಹೊರಬರುತ್ತವೆ. ಅವುಗಳನ್ನು ಹಿಡಿದು ಹೊರಗೆ ಎಸೆಯಲಾಗುತ್ತದೆ. ಚುನಾವಣಾ ಆಯೋಗವು ನುಸುಳುಕೋರರ ಸಮಸ್ಯೆಗೆ ‘ಎಸ್ಐಆರ್’ ಎಂಬ ಸೂಕ್ತ ಔಷಧಿ ಬಳಕೆ ಮಾಡುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಅಧಿಕಾರಿ ಹೇಳಿದ್ದಾರೆ.</p>