<p><strong>ಲಖನೌ</strong>: ಉತ್ತರ ಪ್ರದೇಶದ ವಿವಿಧೆಡೆ ಮಂಗಳವಾರ ಸಂಭವಿಸಿದ ಗುಡುಗು–ಮಿಂಚಿನ ಹೊಡೆತ ಹಾಗೂ ವ್ಯಾಪಕ ಮಳೆಯಿಂದ ಮನೆಗಳು ಕುಸಿದು 16 ಮಂದಿ ಮೃತಪಟ್ಟಿದ್ದಾರೆ.</p>.<p>ಭಾರಿ ಮಳೆಯಿಂದ ಮೀರಠ್, ಮೊರಾದಾಬಾದ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮನೆಗಳು ಕುಸಿದು ಆರು ಮಂದಿ ಮೃತಪಟ್ಟಿರುವುದು ವರದಿಯಾಗಿದೆ.</p>.<p>ಮಿರ್ಜಾಪುರ, ಪ್ರಯಾಗ್ರಾಜ್, ಪ್ರತಾಪಗಢ, ಗೊಂಡಾ ಜಿಲ್ಲೆಗಳಲ್ಲಿ ಮಿಂಚಿನ ಹೊಡೆತದಿಂದ 10 ಮಂದಿ ಮೃತಪಟ್ಟಿದ್ದಾರೆ.</p>.<p>ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು ಬಿದ್ದು, ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಮರಗಳು ಬುಡ ಸಮೇತ ಕುಸಿದುಬಿದ್ದಿದ್ದು, ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.</p>.<p>ಮಳೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸು ಪಡೆದುಕೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿಯು ಸಂತ್ರಸ್ತರಿಗೆ ನೆರವು ಒದಗಿಸಿದ್ದಾರೆ.</p>.<p>ಶಿಮ್ಲಾ ವರದಿ: ಹಿಮಾಚಲ ಪ್ರದೇಶದಲ್ಲಿ ಮಂಗಳವಾರವೂ ಭಾರಿ ಮಳೆ ಮುಂದುವರಿದಿದ್ದು, ಆರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 1,311 ರಸ್ತೆಗಳಲ್ಲಿ ವಾಹನಗಳ ಸಂಚಾರ, ರಾಜ್ಯದಾದ್ಯಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ– ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.</p>.<p>1,305 ರಸ್ತೆಗಳ ಪೈಕಿ ಮಂಡಿ ಜಿಲ್ಲೆಯಲ್ಲಿ 289, ಶಿಮ್ಲಾದಲ್ಲಿ 241, ಛಂಬಾದಲ್ಲಿ 239, ಕುಲ್ಲುವಿನಲ್ಲಿ 169 ಹಾಗೂ ಸಿರ್ಮೌರ್ ಜಿಲ್ಲೆಯ 127 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.</p>.<p>ಸೋಲಾನ್ ಜಿಲ್ಲೆಯ ಸನ್ವಾರಾದಲ್ಲಿ ಸಂಭವಿಸಿದ ಭೂಕುಸಿತದಿಂದ ಶಿಮ್ಲಾದಿಂದ ಕಲ್ಕಾ ಸಂಪರ್ಕಿಸುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. </p>.<p><strong>ಮಳೆ–ವಿವಿಧ ರಾಜ್ಯಗಳಲ್ಲಿ ಹಾನಿಯ ವಿವರ....</strong></p>.<p>*ಸೆ.5ರವರೆಗೆ ಶಿಮ್ಲಾ– ಕಲ್ಕಾ ನಡುವೆ ರೈಲು ಸಂಚಾರ ಸ್ಥಗಿತ</p>.<p>*ಸಂಪರ್ಕ ರಸ್ತೆಗಳು ಬಂದ್– ಮಾರುಕಟ್ಟೆಯಲ್ಲಿ ಸೇಬು ರವಾನಿಸಲು ಸಂಕಷ್ಟ</p>.<p>*ಮುಂಗಾರು: ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 327 ಮಂದಿ ಬಲಿ–3,158 ಕೋಟಿ ನಷ್ಟ</p>.<p>*ಉಕ್ಕಿ ಹರಿಯುತ್ತಿರುವ ಯಮುನಾ ನದಿ–ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಂದ ಪರಿಶೀಲನೆ</p>.<p>*ಪಂಜಾಬ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆಮ್ ಆದ್ಮಿ ಪಕ್ಷದ ಶಾಸಕರು, ಸಂಸದರ ಒಂದು ತಿಂಗಳ ವೇತನ ದೇಣಿಗೆ</p>.<p>*ರಾಜ್ಯಕ್ಕೆ ಬಾಕಿ ಉಳಿಸಿರುವ ₹60 ಸಾವಿರ ಕೋಟಿ ಬಿಡುಗಡೆಗೊಳಿಸಿ– ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಗ್ರಹ</p>.<p>* ಜಮ್ಮು–ಕಾಶ್ಮೀರದ ದೋಡಾ– ಕಿಶ್ತ್ವಾರ್ ಸಂಪರ್ಕಿಸುವ ಬೈಲಿ ಸೇತುವೆ ಮರುನಿರ್ಮಿಸಿದ ಸೇನೆ</p>.<p>*ಹರಿಯಾಣದಲ್ಲಿಯೂ ನಿರಂತರ ಮಳೆ– ಗುರುಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ಉತ್ತರ ಪ್ರದೇಶದ ವಿವಿಧೆಡೆ ಮಂಗಳವಾರ ಸಂಭವಿಸಿದ ಗುಡುಗು–ಮಿಂಚಿನ ಹೊಡೆತ ಹಾಗೂ ವ್ಯಾಪಕ ಮಳೆಯಿಂದ ಮನೆಗಳು ಕುಸಿದು 16 ಮಂದಿ ಮೃತಪಟ್ಟಿದ್ದಾರೆ.</p>.<p>ಭಾರಿ ಮಳೆಯಿಂದ ಮೀರಠ್, ಮೊರಾದಾಬಾದ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮನೆಗಳು ಕುಸಿದು ಆರು ಮಂದಿ ಮೃತಪಟ್ಟಿರುವುದು ವರದಿಯಾಗಿದೆ.</p>.<p>ಮಿರ್ಜಾಪುರ, ಪ್ರಯಾಗ್ರಾಜ್, ಪ್ರತಾಪಗಢ, ಗೊಂಡಾ ಜಿಲ್ಲೆಗಳಲ್ಲಿ ಮಿಂಚಿನ ಹೊಡೆತದಿಂದ 10 ಮಂದಿ ಮೃತಪಟ್ಟಿದ್ದಾರೆ.</p>.<p>ಮಳೆಯಿಂದ ಹಲವೆಡೆ ವಿದ್ಯುತ್ ಕಂಬಗಳು ಬಿದ್ದು, ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ಮರಗಳು ಬುಡ ಸಮೇತ ಕುಸಿದುಬಿದ್ದಿದ್ದು, ಕೆಲವೆಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.</p>.<p>ಮಳೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸು ಪಡೆದುಕೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿಯು ಸಂತ್ರಸ್ತರಿಗೆ ನೆರವು ಒದಗಿಸಿದ್ದಾರೆ.</p>.<p>ಶಿಮ್ಲಾ ವರದಿ: ಹಿಮಾಚಲ ಪ್ರದೇಶದಲ್ಲಿ ಮಂಗಳವಾರವೂ ಭಾರಿ ಮಳೆ ಮುಂದುವರಿದಿದ್ದು, ಆರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 1,311 ರಸ್ತೆಗಳಲ್ಲಿ ವಾಹನಗಳ ಸಂಚಾರ, ರಾಜ್ಯದಾದ್ಯಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಾಲಾ– ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.</p>.<p>1,305 ರಸ್ತೆಗಳ ಪೈಕಿ ಮಂಡಿ ಜಿಲ್ಲೆಯಲ್ಲಿ 289, ಶಿಮ್ಲಾದಲ್ಲಿ 241, ಛಂಬಾದಲ್ಲಿ 239, ಕುಲ್ಲುವಿನಲ್ಲಿ 169 ಹಾಗೂ ಸಿರ್ಮೌರ್ ಜಿಲ್ಲೆಯ 127 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.</p>.<p>ಸೋಲಾನ್ ಜಿಲ್ಲೆಯ ಸನ್ವಾರಾದಲ್ಲಿ ಸಂಭವಿಸಿದ ಭೂಕುಸಿತದಿಂದ ಶಿಮ್ಲಾದಿಂದ ಕಲ್ಕಾ ಸಂಪರ್ಕಿಸುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. </p>.<p><strong>ಮಳೆ–ವಿವಿಧ ರಾಜ್ಯಗಳಲ್ಲಿ ಹಾನಿಯ ವಿವರ....</strong></p>.<p>*ಸೆ.5ರವರೆಗೆ ಶಿಮ್ಲಾ– ಕಲ್ಕಾ ನಡುವೆ ರೈಲು ಸಂಚಾರ ಸ್ಥಗಿತ</p>.<p>*ಸಂಪರ್ಕ ರಸ್ತೆಗಳು ಬಂದ್– ಮಾರುಕಟ್ಟೆಯಲ್ಲಿ ಸೇಬು ರವಾನಿಸಲು ಸಂಕಷ್ಟ</p>.<p>*ಮುಂಗಾರು: ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 327 ಮಂದಿ ಬಲಿ–3,158 ಕೋಟಿ ನಷ್ಟ</p>.<p>*ಉಕ್ಕಿ ಹರಿಯುತ್ತಿರುವ ಯಮುನಾ ನದಿ–ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಂದ ಪರಿಶೀಲನೆ</p>.<p>*ಪಂಜಾಬ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆಮ್ ಆದ್ಮಿ ಪಕ್ಷದ ಶಾಸಕರು, ಸಂಸದರ ಒಂದು ತಿಂಗಳ ವೇತನ ದೇಣಿಗೆ</p>.<p>*ರಾಜ್ಯಕ್ಕೆ ಬಾಕಿ ಉಳಿಸಿರುವ ₹60 ಸಾವಿರ ಕೋಟಿ ಬಿಡುಗಡೆಗೊಳಿಸಿ– ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಗ್ರಹ</p>.<p>* ಜಮ್ಮು–ಕಾಶ್ಮೀರದ ದೋಡಾ– ಕಿಶ್ತ್ವಾರ್ ಸಂಪರ್ಕಿಸುವ ಬೈಲಿ ಸೇತುವೆ ಮರುನಿರ್ಮಿಸಿದ ಸೇನೆ</p>.<p>*ಹರಿಯಾಣದಲ್ಲಿಯೂ ನಿರಂತರ ಮಳೆ– ಗುರುಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>