ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಮಂಡಳಿ ನೀಡಿರುವ ಆದೇಶವನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ‘ಕಾವೇರಿ ನಮ್ಮದು‘ ಎಂಬ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈಗಾಗಲೇ #ಕಾವೇರಿನಮ್ಮದು ಎಂಬ ಹ್ಯಾಶ್ ಟ್ಯಾಗ್ ಭಾರಿ ಟ್ರೆಂಡ್ ಆಗುತ್ತಿದೆ.
ಕಾವೇರಿ ನಮ್ಮದು ಎಂಬ ಅಭಿಯಾನಕ್ಕೆ ವಿವಿಧ ಸಂಘಟನೆಗಳ ನಾಯಕರು ಸೇರಿದಂತೆ ಸ್ವಯಂ ಪ್ರೇರಿತರಾಗಿ ಅನೇಕರು ಪೋಸ್ಟ್ಗಳನ್ನು ಹಂಚಿಕೊಂಡು ಜನರು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ನಾಯಕರು ಕಾವೇರಿ ನಮ್ಮದು ಎಂಬ ಹ್ಯಾಶ್ಟ್ಯಾಗ್ ಬಳಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ವಿವಿಧ ಸಂಘಟನೆಗಳು ಪ್ರತಿಭಟನೆಗಳು ನಡೆಸುತ್ತಿವೆ. ಇದರ ಮುಂದುವರೆದ ಭಾಗವಾಗಿ ನಾಳೆ ( ಸೆಪ್ಟೆಂಬರ್ 26ರಂದು ) ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್ಗೆ ಕರೆ ನೀಡಿದ್ದು, 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂದೇ ರಾಮನಗರ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲೂ ಬಂದ್ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.
ಬಿಎಂಟಿಸಿ ಬಸ್ಗಳನ್ನು ರಸ್ತೆಗಿಳಿಸದಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಕರೆ ನೀಡಿದ್ದು ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆಟೊ, ಕ್ಯಾಬ್ ಸಂಚಾರ ಇರುವುದಿಲ್ಲ. ಕರ್ನಾಟಕ ಟೆಲಿವಿಷನ್ ಕಲಾವಿದರ ಸಂಘ ಚಿತ್ರೀಕರಣ ಬಂದ್ ಮಾಡಲು ತೀರ್ಮಾನಿಸಿದೆ.
ಕನ್ನಡಿಗರ ಹಿತ ಕಡೆಗಣಿಸಿ @INCKarnataka ಸರಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಪರಿಣಾಮ ಕೃಷ್ಣರಾಜಸಾಗರ ಜಲಾಶಯ ಬರಿದಾಗಿದೆ. ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ, ಅಧಿಕಾರಿಗಳಿಂದ ಮಾಹಿತಿ ಪಡೆದೆ. ರಾಜ್ಯದ ಪಾಲಿನ ಸಮೃದ್ಧಿಯ ಸಂಕೇತ ಕನ್ನಂಬಾಡಿ ಅಣೆಕಟ್ಟೆ ಭಣಗುಡುತ್ತಿದೆ.1/2#ಕಾವೇರಿನಮ್ಮದು pic.twitter.com/wQu80cBPpD
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 23, 2023
ನಾಡು ಮತ್ತು ನಾಡಿನ ರೈತರ ಹಿತ ಕಾಪಾಡುವ ನಮ್ಮ ಪ್ರಯತ್ನ ನಿರಂತರವಾಗಿದೆ.#ಕಾವೇರಿನಮ್ಮದು #CauveryIssue pic.twitter.com/Sm8XaoiDVu
— Siddaramaiah (@siddaramaiah) September 23, 2023
ಎಲ್ಲರೂ ಭಾಗವಹಿಸಿ ಗೆಳೆಯರೇ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) September 25, 2023
ಇಂದು ಸಂಜೆ 6ರಿಂದ ಟ್ವಿಟ್ಟರ್ ಅಭಿಯಾನ
ಕನ್ನಡಿಗರಿಗೆ ನ್ಯಾಯ ಸಿಗಲಿ
ಕಾವೇರಿ ಉಳಿವಿಗೆ ನಮ್ಮ ಆಳುವವರಿಗೆ ಮನವರಿಕೆ ಆಗಲಿ..
ಬೆಂಬಲವಿರಲಿ @AsianetNewsSN@tv9kannada@News18Kannada@publictvnews@NimmaShivanna@dasadarshan@KicchaSudeep@TheNameIsYash#ಕಾವೇರಿನಮ್ಮದು pic.twitter.com/Q0w2pwciae
100% ಸರಿಯಿದೆ @vasantshetty81 ಈಗಲಾದರೂ ಕನ್ನಡಿಗರು ಎಚ್ಚೆತ್ತು ನಾಡು-ನುಡಿ-ನೀರು ಈ ರೀತಿಯ ಪ್ರಾದೇಶಿಕ ವಿಷಯಗಳ ಸುತ್ತು ನಮ್ಮ ರಾಜಕೀಯ ಕೇಂದ್ರಿತ ಇರುವಂತೆ ನೋಡಿಕೊಳ್ಳ ಬೆಕಿದೆ. ರಾಷ್ಟ್ರೀಯ ಪಕ್ಷಗಳು ಎಂದಿಗೂ ದಿಲ್ಲಿ ಪರವೇ. ಪ್ರಾದೇಶಿಕ ಪಕ್ಷ ಒಂದೇ ಪರಿಹಾರ. #ಕಾವೇರಿನಮ್ಮದು pic.twitter.com/CyT6woyL3M
— Gopalkrishna (ಗೋಪಾಲ್ ಕೃಷ್ಣ) (@Lifeuishte) September 22, 2023
ಸ್ವಾಭಿಮಾನಿ ಕನ್ನಡಿಗರೆ ಮತ್ತು ಕಾವೇರಿ ನೀರು ಕುಡಿಯುವ ಜನರೇ ಮರೆಯದಿರಿ ಸಂಜೆ ೬ ಕ್ಕೆ #ಕಾವೇರಿನಮ್ಮದು ಇದೆ ಘರ್ಜನೆ ಇಂದು Twitter ತುಂಬೆಲ್ಲ ಮೊಳಗಲಿ. pic.twitter.com/x8EeImsI5Q
— Shivanand Gundanavar (@shivanand087) September 25, 2023
#ಕಾವೇರಿನಮ್ಮದು
— ಕಿರಿಕ್ಗೆ ಕಾರ್ತಿಕ್ l KIRIKge K@rTH!K 🟨🟥 (@VKkarthik169) September 25, 2023
ಕಾವೇರಿ ಉಳಿವಿಗೆ ನಮ್ಮ ಆಳುವ ಸರ್ಕಾರಕ್ಕೆ,ಸದ್ದೇ ಮಾಡದ ಸಂಸದರಿಗೆ ನಮ್ಮ ಒತ್ತಾಯ ಮಾಡೋಣ
ಇಂದು ಸಂಜೆ ಟ್ವಿಟ್ಟರ್ ಅಭಿಯಾನ
ಇಡೀ ಇಡೀ ದೇಶಾದ್ಯಂತ ಸುದ್ದಿಯಾಗಲಿ #ಕಾವೇರಿನಮ್ಮದು
ಇಂದು ಸಂಜೆ 6 ರಿಂದ ಟ್ವಿಟರ್ ಟ್ರೆಂಡ್#ಕಾವೇರಿನಮ್ಮದು
25/09/2023
ಸಮಯ ಮಾಡಿಕೊಂಡು ಭಾಗವಹಿಸಿ ಗೆಳೆಯರೇ
ಈ ಹ್ಯಾಶ್ ಟ್ಯಾಗ್ ಬಳಸಿ… pic.twitter.com/x4a8iYnDeG
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.