<p><strong>ವಾಷಿಂಗ್ಟನ್ / ನ್ಯೂಯಾರ್ಕ್:</strong> 26/11ರ ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು ಎಂದು ದಾಳಿಯ ಮುಖ್ಯ ರೂವಾರಿ ತಹವ್ವುರ್ ರಾಣಾ ಹೇಳಿದ್ದಾಗಿ ಅಮೆರಿಕದ ಕಾನೂನು ಇಲಾಖೆ ಹೇಳಿದೆ. ಅಲ್ಲದೆ ದಾಳಿಯಲ್ಲಿ ಸಾವಿಗೀಡಾದ 9 ಮಂದಿ ಲಷ್ಕರ್–ಎ–ತಯಬಾ ಉಗ್ರರಿಗೆ ಪಾಕಿಸ್ತಾನ ಅತ್ಯುನ್ನತ ‘ನಿಶಾನ್–ಎ–ಹೈದರ್’ ಪುರಸ್ಕಾರ ನೀಡಬೇಕು ಎಂದೂ ಹೇಳಿದ್ದಾಗಿ ಅದು ಮಾಹಿತಿ ನೀಡಿದೆ.</p>.ಮುಂಬೈ ದಾಳಿ ಆರೋಪಿ ರಾಣಾ ಹಸ್ತಾಂತರ ಯಶಸ್ವಿ: ಎನ್ಐಎ.<p>‘ಭಾರತೀಯರು ಈ ದಾಳಿಗೆ ಅರ್ಹರು’ ಎಂದು ಘಟನೆ ನಡೆದ ಬಳಿಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೊಲಮನ್ ಹೆಡ್ಲಿ ಜೊತೆಗೆ ರಾಣಾ ಹೇಳಿದ್ದಾಗಿ ಕಾನೂನು ಇಲಾಖೆಯ ಪ್ರಕಟಣೆ ಹೇಳಿದೆ.</p><p>2008ರ ಉಗ್ರ ದಾಳಿ ಸಂಬಂಧ ಪಾಕಿಸ್ತಾನ ಮೂಲದ ಕೆನಡಿಯನ್ ಉದ್ಯಮಿ ರಾಣಾ ಮೇಲೆ ಭಾರತದಲ್ಲಿ 10 ಕ್ರಿಮಿನಲ್ ಪ್ರಕರಣಗಳಿವೆ. ಆತನನ್ನು ಗುರುವಾರ ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿತ್ತು.</p>.26/11 ಮುಂಬೈ ದಾಳಿಯ ಆರೋಪಿ ರಾಣಾ 18 ದಿನ ಎನ್ಐಎ ಕಸ್ಟಡಿಗೆ.<p>‘ಘೋರ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ನರು ಮತ್ತು ಇತರ ಹಲವಾರು ಮಂದಿಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಣಾ ಅವರ ಹಸ್ತಾಂತರವು ಒಂದು ನಿರ್ಣಾಯಕ ಹೆಜ್ಜೆಯಾಗಿದೆ’ ಎಂದು ಅಮೆರಿಕ ಹೇಳಿದೆ.</p><p>ಎರಡು ವರ್ಷಗಳಿಗೂ ಹೆಚ್ಚು ಚಿಕಾಗೋದಲ್ಲಿ ರಾಣಾನನ್ನು ಪದೇ ಪದೇ ಭೇಟಿಯಾಗಿದ್ದ ಹೆಡ್ಲಿ, ಎಲ್ಇಟಿಯ ಚಟುವಟಿಕೆಗಳು, ಹೆಡ್ಲಿಯ ಚಟುವಟಿಕೆಗಳಿಗೆ ಎಲ್ಇಟಿಯ ಪ್ರತಿಕ್ರಿಯೆಗಳು ಮತ್ತು ಮುಂಬೈ ಮೇಲೆ ದಾಳಿ ಮಾಡುವ ಎಲ್ಇಟಿಯ ಸಂಭಾವ್ಯ ಯೋಜನೆಗಳನ್ನು ವಿವರಿಸಿದ್ದ’ ಎಂದು ಪ್ರಕಟಣೆ ತಿಳಿಸಿದೆ. </p><p>ಹೆಡ್ಲಿ ಪಾಕಿಸ್ತಾನದಲ್ಲಿ ಎಲ್ಇಟಿ ಸದಸ್ಯರಿಂದ ತರಬೇತಿ ಪಡೆದಿದ್ದ. ಮುಂಬೈ ದಾಳಿ ಯೋಜನೆಗಳ ಬಗ್ಗೆ ಭಯೋತ್ಪಾದಕ ಸಂಘಟನೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಭಾರತ ಆರೋಪಿಸುತ್ತಾ ಬಂದಿದೆ.</p>.ಆಳ-ಅಗಲ | ಮುಂಬೈ ದಾಳಿ: ತಹವ್ವುರ್ ಹುಸೇನ್ ರಾಣಾ ಪಾತ್ರವೇನು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್ / ನ್ಯೂಯಾರ್ಕ್:</strong> 26/11ರ ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು ಎಂದು ದಾಳಿಯ ಮುಖ್ಯ ರೂವಾರಿ ತಹವ್ವುರ್ ರಾಣಾ ಹೇಳಿದ್ದಾಗಿ ಅಮೆರಿಕದ ಕಾನೂನು ಇಲಾಖೆ ಹೇಳಿದೆ. ಅಲ್ಲದೆ ದಾಳಿಯಲ್ಲಿ ಸಾವಿಗೀಡಾದ 9 ಮಂದಿ ಲಷ್ಕರ್–ಎ–ತಯಬಾ ಉಗ್ರರಿಗೆ ಪಾಕಿಸ್ತಾನ ಅತ್ಯುನ್ನತ ‘ನಿಶಾನ್–ಎ–ಹೈದರ್’ ಪುರಸ್ಕಾರ ನೀಡಬೇಕು ಎಂದೂ ಹೇಳಿದ್ದಾಗಿ ಅದು ಮಾಹಿತಿ ನೀಡಿದೆ.</p>.ಮುಂಬೈ ದಾಳಿ ಆರೋಪಿ ರಾಣಾ ಹಸ್ತಾಂತರ ಯಶಸ್ವಿ: ಎನ್ಐಎ.<p>‘ಭಾರತೀಯರು ಈ ದಾಳಿಗೆ ಅರ್ಹರು’ ಎಂದು ಘಟನೆ ನಡೆದ ಬಳಿಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೊಲಮನ್ ಹೆಡ್ಲಿ ಜೊತೆಗೆ ರಾಣಾ ಹೇಳಿದ್ದಾಗಿ ಕಾನೂನು ಇಲಾಖೆಯ ಪ್ರಕಟಣೆ ಹೇಳಿದೆ.</p><p>2008ರ ಉಗ್ರ ದಾಳಿ ಸಂಬಂಧ ಪಾಕಿಸ್ತಾನ ಮೂಲದ ಕೆನಡಿಯನ್ ಉದ್ಯಮಿ ರಾಣಾ ಮೇಲೆ ಭಾರತದಲ್ಲಿ 10 ಕ್ರಿಮಿನಲ್ ಪ್ರಕರಣಗಳಿವೆ. ಆತನನ್ನು ಗುರುವಾರ ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿತ್ತು.</p>.26/11 ಮುಂಬೈ ದಾಳಿಯ ಆರೋಪಿ ರಾಣಾ 18 ದಿನ ಎನ್ಐಎ ಕಸ್ಟಡಿಗೆ.<p>‘ಘೋರ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ನರು ಮತ್ತು ಇತರ ಹಲವಾರು ಮಂದಿಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಣಾ ಅವರ ಹಸ್ತಾಂತರವು ಒಂದು ನಿರ್ಣಾಯಕ ಹೆಜ್ಜೆಯಾಗಿದೆ’ ಎಂದು ಅಮೆರಿಕ ಹೇಳಿದೆ.</p><p>ಎರಡು ವರ್ಷಗಳಿಗೂ ಹೆಚ್ಚು ಚಿಕಾಗೋದಲ್ಲಿ ರಾಣಾನನ್ನು ಪದೇ ಪದೇ ಭೇಟಿಯಾಗಿದ್ದ ಹೆಡ್ಲಿ, ಎಲ್ಇಟಿಯ ಚಟುವಟಿಕೆಗಳು, ಹೆಡ್ಲಿಯ ಚಟುವಟಿಕೆಗಳಿಗೆ ಎಲ್ಇಟಿಯ ಪ್ರತಿಕ್ರಿಯೆಗಳು ಮತ್ತು ಮುಂಬೈ ಮೇಲೆ ದಾಳಿ ಮಾಡುವ ಎಲ್ಇಟಿಯ ಸಂಭಾವ್ಯ ಯೋಜನೆಗಳನ್ನು ವಿವರಿಸಿದ್ದ’ ಎಂದು ಪ್ರಕಟಣೆ ತಿಳಿಸಿದೆ. </p><p>ಹೆಡ್ಲಿ ಪಾಕಿಸ್ತಾನದಲ್ಲಿ ಎಲ್ಇಟಿ ಸದಸ್ಯರಿಂದ ತರಬೇತಿ ಪಡೆದಿದ್ದ. ಮುಂಬೈ ದಾಳಿ ಯೋಜನೆಗಳ ಬಗ್ಗೆ ಭಯೋತ್ಪಾದಕ ಸಂಘಟನೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಭಾರತ ಆರೋಪಿಸುತ್ತಾ ಬಂದಿದೆ.</p>.ಆಳ-ಅಗಲ | ಮುಂಬೈ ದಾಳಿ: ತಹವ್ವುರ್ ಹುಸೇನ್ ರಾಣಾ ಪಾತ್ರವೇನು?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>