ದೇಶ ಗೌರವಾನ್ವಿತ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಅವರು ದೇಶದ ಆರ್ಥಿಕ ನೀತಿಗೆ ಹೊಸ ರೂಪ ನೀಡಿದವರು. ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ದೇಶದ ಜನರ ಜೀವನಮಟ್ಟವನ್ನು ಸುಧಾರಿಸಲು ಗಣನೀಯವಾದ ಕೊಡುಗೆ ನೀಡಿದ್ದಾರೆ
ನರೇಂದ್ರ ಮೋದಿ, ಪ್ರಧಾನಿ
ಮನಮೋಹನ ಸಿಂಗ್ ಅವರ ಅಗಲಿಕೆಯೊಂದಿಗೆ ದೇಶ ಮುತ್ಸದ್ದಿ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಆರ್ಥಿಕ ಉದಾರೀಕರಣ ಕುರಿತ ಅವರ ನೀತಿಗಳು ಕೋಟ್ಯಂತರ ಜನರ ಬದುಕು ಬದಲಿಸಿದೆ.
ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ
ಮನಮೋಹನ್ ಸಿಂಗ್ ಅವರು ನಿರ್ಣಾಯಕ ಕಾಲಘಟ್ಟದಲ್ಲಿ ದೇಶವನ್ನು ಮುನ್ನಡೆಸಿದ್ದರು ಹಾಗೂ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಹಾದಿಯನ್ನು ತೋರಿದ್ದರು.
ಜಗದೀಪ್ ಧನಕರ್,ಉಪ ರಾಷ್ಟ್ರಪತಿ
ಅಪಾರ ಜ್ಞಾನ ಹೊಂದಿದ್ದ ಅವರು ಅಭಿವೃದ್ಧಿಯ ಪಥದಲ್ಲಿ ದೇಶವನ್ನು ಮುನ್ನಡೆಸಿದವರು. ನಮ್ರತೆ ಮತ್ತು ಆರ್ಥಿಕತೆ ಕುರಿತ ಅವರ ಅರಿವು ರಾಷ್ಟ್ರಕ್ಕೆ ಸ್ಫೂರ್ತಿದಾಯಕವಾಗಿತ್ತು.
ರಾಹುಲ್ಗಾಂಧಿ , ಲೋಕಸಭೆ ವಿರೋಧಪಕ್ಷದ ನಾಯಕ
ರಾಜಕಾರಣದಲ್ಲಿ ಕೆಲವರು ಪ್ರೇರಕಶಕ್ತಿಯಾಗಿದ್ದು, ವಿಶೇಷ ಗೌರವಕ್ಕೆ ಪಾತ್ರರಾಗುತ್ತಾರೆ. ಮನಮೋಹನ್ ಸಿಂಗ್ ಅಂತಹ ನಾಯಕರಲ್ಲಿ ಒಬ್ಬರು.