ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಕಮಲ್ನಾಥ್ ಅವರು,‘ ರಾಜ್ಯದಲ್ಲಿ ನಕಲಿಮದ್ಯ ಮಾಫಿಯಾ ಬಹಳ ಹಾನಿಯನ್ನುಂಟು ಮಾಡುತ್ತಿದೆ. ಈ ಹಿಂದೆ ಉಜ್ಜೈನಿಯಲ್ಲಿ 16 ಜನರು ಮೃತಪಟ್ಟಿದ್ದರು. ಈಗ ಮೊರೆನಾದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಶಿವರಾಜ್ ಅವರೇ ಈ ರೀತಿ ಎಲ್ಲಿಯವರೆಗೆ ನಕಲಿ ಮದ್ಯ, ಜನರನ್ನು ಬಲಿ ಪಡೆಯುತ್ತದೆ’ ಎಂದು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.