ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ದಲಿತರ ಮದುವೆ ಮೆರವಣಿಗೆ ಮೇಲೆ ದಾಳಿ: ನಾಲ್ವರಿಗೆ ಗಾಯ

Last Updated 26 ಮೇ 2022, 13:36 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ ಸಮೀಪದ ಡಂಗರ್ವ ಗ್ರಾಮದ ದಲಿತ ಯುವತಿಯೊಬ್ಬರ ಮದುವೆ ಮೆರವಣಿಗೆಯ ಮೇಲೆ ಠಾಕೂರ್ ಸಮುದಾಯದ ಹಲವು ಸದಸ್ಯರು ಗುರುವಾರ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಡಂಗರ್ವ ಗ್ರಾಮಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮದುವೆ ಮುಗಿದ ನಂತರ ವಧುವಿನ ಕುಟುಂಬವು ಎಫ್‌ಐಆರ್ ದಾಖಲಿಸಲು ಉದ್ದೇಶಿಸಿದೆ.

ವಧು ತಾರಾ ಜಗದೀಶ್ ಪರ್ಮಾರ್ ಮತ್ತು ರಾಹುಲ್ ಹರೇಶ್ ಪರ್ಮಾರ್ ಅವರ ವಿವಾಹ ಗುರುವಾರ ಮಧ್ಯಾಹ್ನ ನಿಗದಿಯಾಗಿತ್ತು. ಮದುವೆಯ ಮೆರವಣಿಗೆ ಗ್ರಾಮದ ಹೊರವಲಯವನ್ನು ತಲುಪಿದಾಗ, ಸುಮಾರು 40 ಜನರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ದಾಳಿ ಮಾಡಿದರು. ಈ ಕುರಿತು ವಧುವಿನ ತಂದೆ ಜಗದೀಶ್ ಪರ್ಮಾರ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT