<p class="title"><strong>ನವದೆಹಲಿ: </strong>1995ರಲ್ಲಿ ವಿವಾಹವಾಗಿದ್ದ ಆ ಜೋಡಿಯ ‘ದಾಂಪತ್ಯ ಜೀವನದ‘ ಅವಧಿ 5–6 ದಿನಗಳಷ್ಟೇ. ಮನೆ ಅಳಿಯನಾಗಿರು ಎಂಬುದು ಪತ್ನಿಯ ಪಟ್ಟು. ವಯಸ್ಸಾದ ತಾಯಿ, ನಿರುದ್ಯೋಗಿ ತಮ್ಮನ ಬಿಟ್ಟು ಬರುವುದಿಲ್ಲ ಎಂಬುದು ಆತನ ಮಾತು. ವಿಷಯ ಕೋರ್ಟ್ ಮೆಟ್ಟಿಲೇರಿತು. ಈಗ ಪತಿಗೆ 55, ಪತ್ನಿಗೆ 50 ವರ್ಷ.</p>.<p class="title">ಸುಪ್ರೀಂ ಕೋರ್ಟ್ನ ಎದುರು ಈ ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠವು ದಂಪತಿಗೆ ಸ್ಪಷ್ಟವಾಗಿ ಹೇಳಿದ್ದು: ನಿಮ್ಮಿಬ್ಬರಿಗೂ ‘ಒಟ್ಟಿಗೆ’ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ‘ಪ್ರತ್ಯೇಕವಾಗಿ‘ ವಾಸಿಸುವುದೇ ಲೇಸು.</p>.<p class="title">‘ನೀವು ಇಡೀ ಬದುಕನ್ನು ಕೋರ್ಟ್ನಲ್ಲಿ ಪರಸ್ಪರ ಹೋರಾಟ ನಡೆಸುವ ಮೂಲಕವೇ ಕಳೆಯಲಾಗದು‘ ಎಂದೂ ಪೀಠ ಅಭಿಪ್ರಾಯಪಟ್ಟಿತು.</p>.<p class="title">ತ್ರಿಪುರಾ ಹೈಕೋರ್ಟ್ ಈ ಹಿಂದೆ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು. ಈಗ, ‘ಪರಸ್ಪರ ಚರ್ಚಿಸಿ ಜೀವನಾಂಶ ಕುರಿತು ತೀರ್ಮಾನಕ್ಕೆ ಬನ್ನಿ’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದೆ.</p>.<p class="title"><strong>ಓದಿ:</strong><a href="https://www.prajavani.net/entertainment/cinema/kangana-ranaut-blames-aamir-khan-for-naga-chaitanya-and-samantha-akkineni-divorce-872215.html" itemprop="url">ಆ ಡಿವೋರ್ಸ್ ಎಕ್ಸ್ಪರ್ಟ್ನ್ನ ಭೇಟಿಯಾದ ಬಳಿಕ ನಾಗ ಚೈತನ್ಯ, ಸಮಂತಾ ಕೈಬಿಟ್ಟಿದ್ದು</a></p>.<p class="title">ಜೀವನಾಂಶ ಕುರಿತ ವಿಷಯವು ಇತ್ಯರ್ಥವಾಗದ ಕಾರಣ ವಿಚ್ಛೇದನಕ್ಕೆ ಆದೇಶ ನೀಡಿದ ಹೈಕೋರ್ಟ್ನ ಕ್ರಮವು ಸರಿಯಾದುದಲ್ಲ ಎಂದು ಪತ್ನಿಯ ಪರವಾಗಿ ಹಾಜರಿದ್ದ ವಕೀಲರು ಪ್ರತಿಪಾದಿಸಿದರು.</p>.<p class="title">ಪತಿಯ ಪರವಾಗಿ ಹಾಜರಿದ್ದ ವಕೀಲ ದುಶ್ಯಂತ್ ಪರಾಶರ್, ‘1995ರಲ್ಲಿ ಮದುವೆಯಾಗಿದ್ದು, ವ್ಯಕ್ತಿಯ ಬದುಕೇ ಹಾಳಾಗಿದೆ. ಕಿರುಕುಳ ಮತ್ತು ಸರಿಪಡಿಸಲಾಗದು ಎಂಬ ಆಧಾರದಲ್ಲಿ ಹೈಕೋರ್ಟ್ ವಿಚ್ಛೇದನ ನೀಡಿತ್ತು. ಕಕ್ಷಿದಾರರಿಗೆ ಪತ್ನಿ ಜೊತೆ ಜೀವಿಸಲು ಇಷ್ಟವಿಲ್ಲ. ಜೀವನಾಂಶ ಕೊಡಲು ಸಿದ್ಧರಿದ್ದಾರೆ‘ ಎಂದು ತಿಳಿಸಿದರು.</p>.<p>ಸಂವಿಧಾನದ 142 ವಿಧಿ ಅನ್ವಯ ಇರುವ ಅಧಿಕಾರವವನ್ನು ಬಳಸಿ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.</p>.<p><strong>ಓದಿ:</strong><a href="https://www.prajavani.net/entertainment/cinema/naga-chaitanya-and-samantha-akkineni-confirms-separation-says-they-have-decided-to-divorce-871931.html" itemprop="url">ಕಡೆಗೂ ಬೇರೆ ಬೇರೆಯಾದ ನಾಗ ಚೈತನ್ಯ ಹಾಗೂ ಸಮಂತಾ: ಡಿವೋರ್ಸ್ ಘೋಷಣೆ</a></p>.<p>‘ಪತ್ನಿ ಸುಶಿಕ್ಷಿತ ಕುಟುಂಬಕ್ಕೆ ಸೇರಿದವರು. ಹೆಚ್ಚು ಓದಿಕೊಂಡಿದ್ದಾರೆ. ಆಕೆಯ ತಂದೆ ಸೇವಾಹಿರಿತನ ಆಧಾರದಲ್ಲಿ ಐಎಎಸ್ಗೆ ಬಡ್ತಿ ಪಡೆದಿದ್ದ ಅಧಿಕಾರಿ. ವಯಸ್ಸಾದ ತನ್ನ ತಾಯಿ, ನಿರುದ್ಯೋಗಿಯಾಗಿದ್ದ ತಮ್ಮನನ್ನು ಬಿಟ್ಟು ಮನೆ ಅಳಿಯನಾಗಿರು ಎಂದು ಪಟ್ಟುಹಿಡಿದಿದ್ದರು. ಅವರ ಮನವೊಲಿಸುವ ಯತ್ನ ಫಲಕೊಡಲಿಲ್ಲ‘ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>1995ರಲ್ಲಿ ವಿವಾಹವಾಗಿದ್ದ ಆ ಜೋಡಿಯ ‘ದಾಂಪತ್ಯ ಜೀವನದ‘ ಅವಧಿ 5–6 ದಿನಗಳಷ್ಟೇ. ಮನೆ ಅಳಿಯನಾಗಿರು ಎಂಬುದು ಪತ್ನಿಯ ಪಟ್ಟು. ವಯಸ್ಸಾದ ತಾಯಿ, ನಿರುದ್ಯೋಗಿ ತಮ್ಮನ ಬಿಟ್ಟು ಬರುವುದಿಲ್ಲ ಎಂಬುದು ಆತನ ಮಾತು. ವಿಷಯ ಕೋರ್ಟ್ ಮೆಟ್ಟಿಲೇರಿತು. ಈಗ ಪತಿಗೆ 55, ಪತ್ನಿಗೆ 50 ವರ್ಷ.</p>.<p class="title">ಸುಪ್ರೀಂ ಕೋರ್ಟ್ನ ಎದುರು ಈ ಪ್ರಕರಣ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠವು ದಂಪತಿಗೆ ಸ್ಪಷ್ಟವಾಗಿ ಹೇಳಿದ್ದು: ನಿಮ್ಮಿಬ್ಬರಿಗೂ ‘ಒಟ್ಟಿಗೆ’ ಜೀವಿಸಲು ಆಗುವುದೇ ಇಲ್ಲ ಎಂದಾದರೆ, ‘ಪ್ರತ್ಯೇಕವಾಗಿ‘ ವಾಸಿಸುವುದೇ ಲೇಸು.</p>.<p class="title">‘ನೀವು ಇಡೀ ಬದುಕನ್ನು ಕೋರ್ಟ್ನಲ್ಲಿ ಪರಸ್ಪರ ಹೋರಾಟ ನಡೆಸುವ ಮೂಲಕವೇ ಕಳೆಯಲಾಗದು‘ ಎಂದೂ ಪೀಠ ಅಭಿಪ್ರಾಯಪಟ್ಟಿತು.</p>.<p class="title">ತ್ರಿಪುರಾ ಹೈಕೋರ್ಟ್ ಈ ಹಿಂದೆ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು. ಈಗ, ‘ಪರಸ್ಪರ ಚರ್ಚಿಸಿ ಜೀವನಾಂಶ ಕುರಿತು ತೀರ್ಮಾನಕ್ಕೆ ಬನ್ನಿ’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದೆ.</p>.<p class="title"><strong>ಓದಿ:</strong><a href="https://www.prajavani.net/entertainment/cinema/kangana-ranaut-blames-aamir-khan-for-naga-chaitanya-and-samantha-akkineni-divorce-872215.html" itemprop="url">ಆ ಡಿವೋರ್ಸ್ ಎಕ್ಸ್ಪರ್ಟ್ನ್ನ ಭೇಟಿಯಾದ ಬಳಿಕ ನಾಗ ಚೈತನ್ಯ, ಸಮಂತಾ ಕೈಬಿಟ್ಟಿದ್ದು</a></p>.<p class="title">ಜೀವನಾಂಶ ಕುರಿತ ವಿಷಯವು ಇತ್ಯರ್ಥವಾಗದ ಕಾರಣ ವಿಚ್ಛೇದನಕ್ಕೆ ಆದೇಶ ನೀಡಿದ ಹೈಕೋರ್ಟ್ನ ಕ್ರಮವು ಸರಿಯಾದುದಲ್ಲ ಎಂದು ಪತ್ನಿಯ ಪರವಾಗಿ ಹಾಜರಿದ್ದ ವಕೀಲರು ಪ್ರತಿಪಾದಿಸಿದರು.</p>.<p class="title">ಪತಿಯ ಪರವಾಗಿ ಹಾಜರಿದ್ದ ವಕೀಲ ದುಶ್ಯಂತ್ ಪರಾಶರ್, ‘1995ರಲ್ಲಿ ಮದುವೆಯಾಗಿದ್ದು, ವ್ಯಕ್ತಿಯ ಬದುಕೇ ಹಾಳಾಗಿದೆ. ಕಿರುಕುಳ ಮತ್ತು ಸರಿಪಡಿಸಲಾಗದು ಎಂಬ ಆಧಾರದಲ್ಲಿ ಹೈಕೋರ್ಟ್ ವಿಚ್ಛೇದನ ನೀಡಿತ್ತು. ಕಕ್ಷಿದಾರರಿಗೆ ಪತ್ನಿ ಜೊತೆ ಜೀವಿಸಲು ಇಷ್ಟವಿಲ್ಲ. ಜೀವನಾಂಶ ಕೊಡಲು ಸಿದ್ಧರಿದ್ದಾರೆ‘ ಎಂದು ತಿಳಿಸಿದರು.</p>.<p>ಸಂವಿಧಾನದ 142 ವಿಧಿ ಅನ್ವಯ ಇರುವ ಅಧಿಕಾರವವನ್ನು ಬಳಸಿ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.</p>.<p><strong>ಓದಿ:</strong><a href="https://www.prajavani.net/entertainment/cinema/naga-chaitanya-and-samantha-akkineni-confirms-separation-says-they-have-decided-to-divorce-871931.html" itemprop="url">ಕಡೆಗೂ ಬೇರೆ ಬೇರೆಯಾದ ನಾಗ ಚೈತನ್ಯ ಹಾಗೂ ಸಮಂತಾ: ಡಿವೋರ್ಸ್ ಘೋಷಣೆ</a></p>.<p>‘ಪತ್ನಿ ಸುಶಿಕ್ಷಿತ ಕುಟುಂಬಕ್ಕೆ ಸೇರಿದವರು. ಹೆಚ್ಚು ಓದಿಕೊಂಡಿದ್ದಾರೆ. ಆಕೆಯ ತಂದೆ ಸೇವಾಹಿರಿತನ ಆಧಾರದಲ್ಲಿ ಐಎಎಸ್ಗೆ ಬಡ್ತಿ ಪಡೆದಿದ್ದ ಅಧಿಕಾರಿ. ವಯಸ್ಸಾದ ತನ್ನ ತಾಯಿ, ನಿರುದ್ಯೋಗಿಯಾಗಿದ್ದ ತಮ್ಮನನ್ನು ಬಿಟ್ಟು ಮನೆ ಅಳಿಯನಾಗಿರು ಎಂದು ಪಟ್ಟುಹಿಡಿದಿದ್ದರು. ಅವರ ಮನವೊಲಿಸುವ ಯತ್ನ ಫಲಕೊಡಲಿಲ್ಲ‘ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>