<p><strong>ಶಿಮ್ಲಾ:</strong> ‘ಖಾಲಿಸ್ತಾನ ಪರ’ ಟ್ವೀಟ್ ಮಾಡಿದ ಆರೋಪದಲ್ಲಿ ಪಕ್ಷದ ಹಿಮಾಚಲ ಪ್ರದೇಶ ಘಟಕದ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹರ್ಪ್ರೀತ್ ಸಿಂಗ್ ಬೇಡಿ ಅವರನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಉಚ್ಚಾಟನೆ ಮಾಡಿದೆ.</p>.<p>ಬೇಡಿ ಬಹಿರಂಗವಾಗಿ ಖಾಲಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಖಾಲಿಸ್ತಾನವನ್ನು ಬೆಂಬಲಿಸಿ ಸರಣಿ ಟ್ವೀಟ್ ಮಾಡಿದ್ದಾರೆ ಎಂದು ಭಾನುವಾರ ಬಿಜೆಪಿ ಆರೋಪಿಸಿತ್ತು.</p>.<p><a href="https://www.prajavani.net/india-news/punjab-patiala-clashes-barjinder-singh-parwana-key-conspirator-arrested-2-days-after-clashes-933090.html" itemprop="url">ಪಟಿಯಾಲ ಹಿಂಸಾಚಾರ: 2 ದಿನಗಳ ಬಳಿಕ ಪ್ರಮುಖ ಸಂಚುಕೋರ ಸೇರಿ ಆರು ಮಂದಿ ಬಂಧನ </a></p>.<p>‘ಹರ್ಪ್ರೀತ್ ಸಿಂಗ್ ಬೇಡಿ ಅವರು ಟ್ವೀಟ್ನಲ್ಲಿ ಉಲ್ಲೇಖಿಸಿರುವ ವಿಚಾರಗಳು ಆಮ್ ಆದ್ಮಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಯಾವುದೇ ರೀತಿಯಲ್ಲಿಯೂ ಪಕ್ಷದ ಅಭಿಪ್ರಾಯವನ್ನು ಪ್ರತಿಧ್ವನಿಸುವುದಿಲ್ಲ’ ಎಂದು ಎಎಪಿ ಟ್ವೀಟ್ ಮಾಡಿದೆ.</p>.<p>‘ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು (ಹರ್ಪ್ರೀತ್ ಸಿಂಗ್ ಬೇಡಿ) ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಗಿದೆ’ ಎಂದು ಎಎಪಿ ಉಲ್ಲೇಖಿಸಿದೆ.</p>.<p>‘ಎಎಪಿಯು ನಮ್ಮ ದೇಶದ ಏಕತೆ, ಸಮಗ್ರತೆಯಲ್ಲಿ ನಂಬಿಕೆ ಇರಿಸಿದೆ. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಯಾರು ಏನೇ ಬರೆದರೂ ಸಹಿಸುವುದಿಲ್ಲ’ ಎಂದು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.</p>.<p><a href="https://www.prajavani.net/india-news/punjab-patiala-clashes-mobile-internet-services-restored-932895.html" itemprop="url">ಪಟಿಯಾಲ ಘರ್ಷಣೆ: ಮೊಬೈಲ್ ಇಂಟರ್ನೆಟ್ ಸೇವೆಗಳ ಮರುಸ್ಥಾಪನೆ </a></p>.<p>ಬೇಡಿ ಅವರು 2012ರಿಂದ 2020ರ ಅವಧಿಯಲ್ಲಿ ಭಾರತ ವಿರೋಧಿ ಮತ್ತು ಖಾಲಿಸ್ತಾನ ಪರವಾಗಿ ಸರಣಿ ಟ್ವೀಟ್ಗಳನ್ನು ಮಾಡಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ:</strong> ‘ಖಾಲಿಸ್ತಾನ ಪರ’ ಟ್ವೀಟ್ ಮಾಡಿದ ಆರೋಪದಲ್ಲಿ ಪಕ್ಷದ ಹಿಮಾಚಲ ಪ್ರದೇಶ ಘಟಕದ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹರ್ಪ್ರೀತ್ ಸಿಂಗ್ ಬೇಡಿ ಅವರನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಉಚ್ಚಾಟನೆ ಮಾಡಿದೆ.</p>.<p>ಬೇಡಿ ಬಹಿರಂಗವಾಗಿ ಖಾಲಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಖಾಲಿಸ್ತಾನವನ್ನು ಬೆಂಬಲಿಸಿ ಸರಣಿ ಟ್ವೀಟ್ ಮಾಡಿದ್ದಾರೆ ಎಂದು ಭಾನುವಾರ ಬಿಜೆಪಿ ಆರೋಪಿಸಿತ್ತು.</p>.<p><a href="https://www.prajavani.net/india-news/punjab-patiala-clashes-barjinder-singh-parwana-key-conspirator-arrested-2-days-after-clashes-933090.html" itemprop="url">ಪಟಿಯಾಲ ಹಿಂಸಾಚಾರ: 2 ದಿನಗಳ ಬಳಿಕ ಪ್ರಮುಖ ಸಂಚುಕೋರ ಸೇರಿ ಆರು ಮಂದಿ ಬಂಧನ </a></p>.<p>‘ಹರ್ಪ್ರೀತ್ ಸಿಂಗ್ ಬೇಡಿ ಅವರು ಟ್ವೀಟ್ನಲ್ಲಿ ಉಲ್ಲೇಖಿಸಿರುವ ವಿಚಾರಗಳು ಆಮ್ ಆದ್ಮಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿವೆ. ಯಾವುದೇ ರೀತಿಯಲ್ಲಿಯೂ ಪಕ್ಷದ ಅಭಿಪ್ರಾಯವನ್ನು ಪ್ರತಿಧ್ವನಿಸುವುದಿಲ್ಲ’ ಎಂದು ಎಎಪಿ ಟ್ವೀಟ್ ಮಾಡಿದೆ.</p>.<p>‘ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು (ಹರ್ಪ್ರೀತ್ ಸಿಂಗ್ ಬೇಡಿ) ಎಲ್ಲ ಹುದ್ದೆಗಳಿಂದ ವಜಾಗೊಳಿಸಲಾಗಿದೆ’ ಎಂದು ಎಎಪಿ ಉಲ್ಲೇಖಿಸಿದೆ.</p>.<p>‘ಎಎಪಿಯು ನಮ್ಮ ದೇಶದ ಏಕತೆ, ಸಮಗ್ರತೆಯಲ್ಲಿ ನಂಬಿಕೆ ಇರಿಸಿದೆ. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಯಾರು ಏನೇ ಬರೆದರೂ ಸಹಿಸುವುದಿಲ್ಲ’ ಎಂದು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದೆ.</p>.<p><a href="https://www.prajavani.net/india-news/punjab-patiala-clashes-mobile-internet-services-restored-932895.html" itemprop="url">ಪಟಿಯಾಲ ಘರ್ಷಣೆ: ಮೊಬೈಲ್ ಇಂಟರ್ನೆಟ್ ಸೇವೆಗಳ ಮರುಸ್ಥಾಪನೆ </a></p>.<p>ಬೇಡಿ ಅವರು 2012ರಿಂದ 2020ರ ಅವಧಿಯಲ್ಲಿ ಭಾರತ ವಿರೋಧಿ ಮತ್ತು ಖಾಲಿಸ್ತಾನ ಪರವಾಗಿ ಸರಣಿ ಟ್ವೀಟ್ಗಳನ್ನು ಮಾಡಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>