<p><strong>ನವದೆಹಲಿ: </strong>ದೆಹಲಿ ಬಜೆಟ್ಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದ ಕೆಲವೇ ಹೊತ್ತಿನಲ್ಲಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ದೊಡ್ಡಣ್ಣ' ಎಂದು ಕರೆದಿದ್ದು, ಜೊತೆಯಾಗಿ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ.</p>.<p>ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಯಾವುದೇ ತಿಕ್ಕಾಟ ಇಲ್ಲದೇ ಇದ್ದಿದ್ದರೆ, ದೆಹಲಿಯು ಹತ್ತು ಪಟ್ಟು ಅಧಿಕ ಪ್ರಗತಿ ಕಾಣುತ್ತಿತ್ತು ಎಂದಿದ್ದಾರೆ.</p>.<p>'ದೆಹಲಿ ಸರ್ಕಾರವು ಕೆಲಸ ಮಾಡಲು ಬಯಸುತ್ತದೆ. ಜಗಳವಾಡುವುದಕ್ಕಲ್ಲ. ನಾವು ಹೋರಾಟ ನಡೆಸಿ ಸುಸ್ತಾಗಿದ್ದೇವೆ. ಅದು ಯಾರಿಗೂ ಉಪಕಾರಿಯಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ನಮಗೆ ಸೆಣಸಾಟ ಬೇಕಾಗಿಲ್ಲ' ಎಂದು ಹೇಳಿದ್ದಾರೆ.</p>.<p>ಮುಂದುವರಿದು, ಪ್ರಧಾನಿ ಮೋದಿ ಅವರು ದೆಹಲಿಯನ್ನು ಗೆಲ್ಲಬೇಕೆಂದು ಬಯಸುವುದಾದರೆ, ಅವರು ಮೊದಲು ಇಲ್ಲಿನ ಜನರ ಹೃದಯ ಗೆಲ್ಲಬೇಕಾಗುತ್ತದೆ. 'ಇದೇ ಅವರಿಗೆ ನನ್ನ ಮಂತ್ರ' ಎಂದಿದ್ದಾರೆ.</p>.<p>'ನೀವು (ಮೋದಿಯವರನ್ನು ಉದ್ದೇಶಿಸಿ) ದೊಡ್ಡಣ್ಣ ಮತ್ತು ನಾನು ತಮ್ಮ. ನೀವು ನನಗೆ ಬೆಂಬಲ ನೀಡಿದರೆ ನಾನೂ ನಿಮಗೆ ಬೆಂಬಲ ಕೊಡುತ್ತೇನೆ. ನೀವು ನಿಮ್ಮ ಕಿರಿಯ ಸಹೋದರನ ಹೃದಯ ಗೆಲ್ಲಲು ಬಯಸುವುದಾದರೆ, ಅವನನ್ನು ಪ್ರೀತಿಸಿ' ಎಂದು ಕಿವಿಮಾತು ಹೇಳಿದ್ದಾರೆ.</p>.<p><strong>ಇದನ್ನೂ ಓದಿ: </strong><a href="https://www.prajavani.net/india-news/delhi-budget-approved-by-mha-say-lieutenant-governor-vk-saxena-office-sources-1025521.html" itemprop="url" target="_blank">ದೆಹಲಿ ಬಜೆಟ್ಗೆ ಗೃಹ ಸಚಿವಾಲಯದ ಅನುಮೋದನೆ: ಲೆ.ಗೌವರ್ನರ್ ಕಚೇರಿಯಿಂದ ಮಾಹಿತಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೆಹಲಿ ಬಜೆಟ್ಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದ ಕೆಲವೇ ಹೊತ್ತಿನಲ್ಲಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ದೊಡ್ಡಣ್ಣ' ಎಂದು ಕರೆದಿದ್ದು, ಜೊತೆಯಾಗಿ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ.</p>.<p>ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಯಾವುದೇ ತಿಕ್ಕಾಟ ಇಲ್ಲದೇ ಇದ್ದಿದ್ದರೆ, ದೆಹಲಿಯು ಹತ್ತು ಪಟ್ಟು ಅಧಿಕ ಪ್ರಗತಿ ಕಾಣುತ್ತಿತ್ತು ಎಂದಿದ್ದಾರೆ.</p>.<p>'ದೆಹಲಿ ಸರ್ಕಾರವು ಕೆಲಸ ಮಾಡಲು ಬಯಸುತ್ತದೆ. ಜಗಳವಾಡುವುದಕ್ಕಲ್ಲ. ನಾವು ಹೋರಾಟ ನಡೆಸಿ ಸುಸ್ತಾಗಿದ್ದೇವೆ. ಅದು ಯಾರಿಗೂ ಉಪಕಾರಿಯಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ನಮಗೆ ಸೆಣಸಾಟ ಬೇಕಾಗಿಲ್ಲ' ಎಂದು ಹೇಳಿದ್ದಾರೆ.</p>.<p>ಮುಂದುವರಿದು, ಪ್ರಧಾನಿ ಮೋದಿ ಅವರು ದೆಹಲಿಯನ್ನು ಗೆಲ್ಲಬೇಕೆಂದು ಬಯಸುವುದಾದರೆ, ಅವರು ಮೊದಲು ಇಲ್ಲಿನ ಜನರ ಹೃದಯ ಗೆಲ್ಲಬೇಕಾಗುತ್ತದೆ. 'ಇದೇ ಅವರಿಗೆ ನನ್ನ ಮಂತ್ರ' ಎಂದಿದ್ದಾರೆ.</p>.<p>'ನೀವು (ಮೋದಿಯವರನ್ನು ಉದ್ದೇಶಿಸಿ) ದೊಡ್ಡಣ್ಣ ಮತ್ತು ನಾನು ತಮ್ಮ. ನೀವು ನನಗೆ ಬೆಂಬಲ ನೀಡಿದರೆ ನಾನೂ ನಿಮಗೆ ಬೆಂಬಲ ಕೊಡುತ್ತೇನೆ. ನೀವು ನಿಮ್ಮ ಕಿರಿಯ ಸಹೋದರನ ಹೃದಯ ಗೆಲ್ಲಲು ಬಯಸುವುದಾದರೆ, ಅವನನ್ನು ಪ್ರೀತಿಸಿ' ಎಂದು ಕಿವಿಮಾತು ಹೇಳಿದ್ದಾರೆ.</p>.<p><strong>ಇದನ್ನೂ ಓದಿ: </strong><a href="https://www.prajavani.net/india-news/delhi-budget-approved-by-mha-say-lieutenant-governor-vk-saxena-office-sources-1025521.html" itemprop="url" target="_blank">ದೆಹಲಿ ಬಜೆಟ್ಗೆ ಗೃಹ ಸಚಿವಾಲಯದ ಅನುಮೋದನೆ: ಲೆ.ಗೌವರ್ನರ್ ಕಚೇರಿಯಿಂದ ಮಾಹಿತಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>