ಚೆನ್ನೈ: ಟಿ.ವಿ. ಚಾನಲ್ಗಳ ಚರ್ಚೆಗಳಿಗೆ ಇನ್ನು ಮುಂದೆ ಪಕ್ಷದ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಎಐಎಡಿಎಂಕೆ ತಿಳಿಸಿದೆ.
ಟಿ.ವಿ. ಚಾನಲ್ಗಳು ಪಕ್ಷದ ಗೌರವ, ಘನತೆಗೆ ಧಕ್ಕೆ ತರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ ಎಂದು ಅದು ದೂರಿದೆ.
ಜನರ ಸಮಸ್ಯೆಗಳ ಬಗ್ಗೆ ಚಾನಲ್ಗಳು ಗಂಭೀರವಾಗಿ ಚರ್ಚೆ ನಡೆಸುತ್ತಿಲ್ಲ. ನೀತಿ ಸಂಹಿತೆಯನ್ನು ಮಾಧ್ಯಮಗಳು ಪಾಲಿಸುತ್ತಿಲ್ಲ ಎಂದು ಎಐಎಡಿಎಂಕೆ ಸಂಚಾಲಕ ಒ. ಪನ್ನೀರಸೇಲ್ವಂ ಮತ್ತು ಜಂಟಿ ಸಂಚಾಲಕ ಇ.ಕೆ. ಪಳನಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.