‘ಕಾಜೀರಂಗ ಅಭಯಾರಣ್ಯದಲ್ಲಿ ನುಸುಳುಕೋರರು ಮತ್ತು ಅಕ್ರಮ ವಲಸಿಗರು ನೆಲವನ್ನು ಒತ್ತುವರಿ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಎಐಯುಡಿಎಫ್ ಅವಕಾಶ ಮಾಡಿಕೊಟ್ಟಿದ್ದವು. ನಾವು ಅದನ್ನು ತೆರವು ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ರಾಜ್ಯದ ಎಲ್ಲೆಡೆ ಉಗ್ರರ ದಾಳಿ, ಗಲಭೆ, ಸಂಘರ್ಷ ನಡೆಯುತ್ತಿತ್ತು. ಇವೆಲ್ಲವನ್ನು ನಿಲ್ಲಿಸುತ್ತೇವೆ ಎಂದು 2016ರ ಚುನಾವಣೆ ಸಂದರ್ಭದಲ್ಲಿ ಹೇಳಿದ್ದೆ. ಈಗ ಅಸ್ಸಾಂ ಉಗ್ರರ ದಾಳಿ, ಗಲಭೆ ಮತ್ತು ಸಂಘರ್ಷಗಳಿಂದ ಮುಕ್ತವಾಗಿದೆ. ರಾಜ್ಯವು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.