<p><strong>ನವದೆಹಲಿ:</strong> ಹುತಾತ್ಮರ ದಿನದ ಅಂಗವಾಗಿ ದೆಹಲಿ ಸರ್ಕಾರವು ಸುದ್ದಿ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ತಪ್ಪಾಗಿದೆ. ಮುಂದೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.</p>.<p>ಬುಧವಾರ ಪ್ರಕಟಗೊಂಡ ದೆಹಲಿ ಸರ್ಕಾರದ ಜಾಹೀರಾತಿನಲ್ಲಿ ಕೇವಲ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಮುದ್ರಿಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ತಪ್ಪೊಪ್ಪಿಕೊಂಡು, ಮುಂದೆ ಹೀಗಾಗುವುದಿಲ್ಲ ಎಂದಿದ್ದಾರೆ.</p>.<p>ದೆಹಲಿ ವಿಧಾನಸಭೆಯ ಬಜೆಟ್ ಕಲಾಪದ ಮೊದಲ ದಿನ, ಹುತಾತ್ಮ ಯೋಧರಿಗೆ ನಮನ ಸಲ್ಲಿಕೆ ಸಂದರ್ಭ ಮಾತನಾಡಿದ ವಿಪಕ್ಷ ನಾಯಕ ರಾಮವೀರ ಸಿಂಗ್ ಬಿಧುರಿ, ದೆಹಲಿ ಸರ್ಕಾರವು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಜಾಹೀರಾತಿನಲ್ಲಿ ಕೇವಲ ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಇದರಲ್ಲಿ ಹುತಾತ್ಮರಾದ ಸುಖದೇವ್ ಮತ್ತು ರಾಜಗುರು ಅವರ ಭಾವಚಿತ್ರವಾಗಲಿ ಮತ್ತು ಹೆಸರಾಗಲಿ ಇಲ್ಲ. ರಾಷ್ಟ್ರದ ಹುತಾತ್ಮರನ್ನು ವಿಭಾಗಿಸಬಾರದು' ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p><a href="https://www.prajavani.net/india-news/rae-bareli-mla-aditi-singh-said-congress-directionless-party-and-wont-come-to-power-for-long-time-922007.html" itemprop="url">ಕಾಂಗ್ರೆಸ್ಗೆ ದಿಕ್ಕಿಲ್ಲ, ದೀರ್ಘಾವಧಿವರೆಗೆ ಅಧಿಕಾರಕ್ಕೇರಲ್ಲ: ರಾಯಬರೇಲಿ ಶಾಸಕಿ </a></p>.<p>'ಸಿಎಂ ಜಾಹೀರಾತಿನಲ್ಲಿ ಆಗಿರುವ ತಪ್ಪನ್ನು ಗುರುತಿಸಬೇಕು. ದೆಹಲಿ ಅಸೆಂಬ್ಲಿ ಆವರಣದಲ್ಲಿರುವ ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಪ್ರತಿಮೆಗಳ ಸಮೀಪ ಹುತಾತ್ಮ ಅಷ್ಫಾಕುಲ್ಲಾ ಖಾನ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು' ಎಂದು ಭಿದುರಿ ಒತ್ತಾಯಿಸಿದರು.</p>.<p>'ವಿಪಕ್ಷ ನಾಯಕರ ಮಾತುಗಳನ್ನು ಒಪ್ಪಿಕೊಳ್ಳುತ್ತೇನೆ. ನಾವು ಹುತಾತ್ಮ ಯೋಧರನ್ನು ವಿಭಾಗಿಸುವುದಿಲ್ಲ. ಇವತ್ತಿನ ಜಾಹೀರಾತಿನಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಮುಂದೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ' ಎಂದು ಕೇಜ್ರಿವಾಲ್ ಉತ್ತರಿಸಿದರು.</p>.<p><a href="https://www.prajavani.net/india-news/youths-in-assam-joining-ulfa-due-to-unemployment-congress-mp-gaurav-gogoi-claims-922031.html" itemprop="url">ನಿರುದ್ಯೋಗದಿಂದ ಬೇಸತ್ತು ಉಲ್ಫಾ ಸೇರುತ್ತಿರುವ ಅಸ್ಸಾಂ ಯುವಕರು: ಕಾಂಗ್ರೆಸ್ ಸಂಸದ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹುತಾತ್ಮರ ದಿನದ ಅಂಗವಾಗಿ ದೆಹಲಿ ಸರ್ಕಾರವು ಸುದ್ದಿ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ತಪ್ಪಾಗಿದೆ. ಮುಂದೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.</p>.<p>ಬುಧವಾರ ಪ್ರಕಟಗೊಂಡ ದೆಹಲಿ ಸರ್ಕಾರದ ಜಾಹೀರಾತಿನಲ್ಲಿ ಕೇವಲ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಮುದ್ರಿಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸಿಎಂ ಕೇಜ್ರಿವಾಲ್ ತಪ್ಪೊಪ್ಪಿಕೊಂಡು, ಮುಂದೆ ಹೀಗಾಗುವುದಿಲ್ಲ ಎಂದಿದ್ದಾರೆ.</p>.<p>ದೆಹಲಿ ವಿಧಾನಸಭೆಯ ಬಜೆಟ್ ಕಲಾಪದ ಮೊದಲ ದಿನ, ಹುತಾತ್ಮ ಯೋಧರಿಗೆ ನಮನ ಸಲ್ಲಿಕೆ ಸಂದರ್ಭ ಮಾತನಾಡಿದ ವಿಪಕ್ಷ ನಾಯಕ ರಾಮವೀರ ಸಿಂಗ್ ಬಿಧುರಿ, ದೆಹಲಿ ಸರ್ಕಾರವು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಜಾಹೀರಾತಿನಲ್ಲಿ ಕೇವಲ ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಇದರಲ್ಲಿ ಹುತಾತ್ಮರಾದ ಸುಖದೇವ್ ಮತ್ತು ರಾಜಗುರು ಅವರ ಭಾವಚಿತ್ರವಾಗಲಿ ಮತ್ತು ಹೆಸರಾಗಲಿ ಇಲ್ಲ. ರಾಷ್ಟ್ರದ ಹುತಾತ್ಮರನ್ನು ವಿಭಾಗಿಸಬಾರದು' ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p><a href="https://www.prajavani.net/india-news/rae-bareli-mla-aditi-singh-said-congress-directionless-party-and-wont-come-to-power-for-long-time-922007.html" itemprop="url">ಕಾಂಗ್ರೆಸ್ಗೆ ದಿಕ್ಕಿಲ್ಲ, ದೀರ್ಘಾವಧಿವರೆಗೆ ಅಧಿಕಾರಕ್ಕೇರಲ್ಲ: ರಾಯಬರೇಲಿ ಶಾಸಕಿ </a></p>.<p>'ಸಿಎಂ ಜಾಹೀರಾತಿನಲ್ಲಿ ಆಗಿರುವ ತಪ್ಪನ್ನು ಗುರುತಿಸಬೇಕು. ದೆಹಲಿ ಅಸೆಂಬ್ಲಿ ಆವರಣದಲ್ಲಿರುವ ಶಹೀದ್ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಪ್ರತಿಮೆಗಳ ಸಮೀಪ ಹುತಾತ್ಮ ಅಷ್ಫಾಕುಲ್ಲಾ ಖಾನ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು' ಎಂದು ಭಿದುರಿ ಒತ್ತಾಯಿಸಿದರು.</p>.<p>'ವಿಪಕ್ಷ ನಾಯಕರ ಮಾತುಗಳನ್ನು ಒಪ್ಪಿಕೊಳ್ಳುತ್ತೇನೆ. ನಾವು ಹುತಾತ್ಮ ಯೋಧರನ್ನು ವಿಭಾಗಿಸುವುದಿಲ್ಲ. ಇವತ್ತಿನ ಜಾಹೀರಾತಿನಲ್ಲಿ ತಪ್ಪಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಮುಂದೆ ಇಂತಹ ತಪ್ಪುಗಳು ಸಂಭವಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ' ಎಂದು ಕೇಜ್ರಿವಾಲ್ ಉತ್ತರಿಸಿದರು.</p>.<p><a href="https://www.prajavani.net/india-news/youths-in-assam-joining-ulfa-due-to-unemployment-congress-mp-gaurav-gogoi-claims-922031.html" itemprop="url">ನಿರುದ್ಯೋಗದಿಂದ ಬೇಸತ್ತು ಉಲ್ಫಾ ಸೇರುತ್ತಿರುವ ಅಸ್ಸಾಂ ಯುವಕರು: ಕಾಂಗ್ರೆಸ್ ಸಂಸದ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>