'ರೈತರು ದೇಶದ್ರೋಹಿಗಳು ಎಂದು ಕೇಂದ್ರ ಸರ್ಕಾರದ ಸಚಿವರು ಹಾಗೂ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಹಲವು ನಿವೃತ್ತ ಯೋಧರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು, ಗಾಯಕರು, ಗಣ್ಯರು, ವೈದ್ಯರು ಹಾಗೂ ವ್ಯಾಪಾರಿಗಳು ರೈತರಿಗೆ ಬೆಂಬಲ ನೀಡಿದ್ದಾರೆ. ಆ ಎಲ್ಲರೂ ದೇಶದ್ರೋಹಿಗಳೇ ಎಂದು ಬಿಜೆಪಿಯನ್ನು ಕೇಳಬೇಕಿದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.