‘ಉಭಯ ರಾಜ್ಯಗಳ ನಡುವಿರುವ ಇದೇ ಸೌಹಾರ್ದ ವಾತಾವರಣವನ್ನು ಮುಂದುವರಿಸುವ ಇಚ್ಛೆಯಿಂದ ನಾನು ಅಸ್ಸಾಂ ಪೊಲೀಸರಿಗೆ ಮಿಜೋರಾಂ ಸಂಸದ ಕೆ.ವನ್ಲವೇಣ್ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಹಿಂದಕ್ಕೆ ಪಡೆಯಲು ತಿಳಿಸಿದ್ದೇನೆ. ಆದರೂ, ಮಿಜೋರಾಂ ಪೊಲೀಸ್ ಅಧಿಕಾರಿಗಳ ವಿರುದ್ಧದ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಮುಂದುವರಿಸಲಾಗುತ್ತದೆ‘ ಎಂದು ಶರ್ಮಾ ಟ್ವೀಟ್ನಲ್ಲಿ ಹೇಳಿದ್ದಾರೆ.