ಗುರುವಾರದಂದು 2.8 ಕಿ.ಮೀ. ಎತ್ತರದ 'ಭಾರತ್ ಜೋಡೊ ಸೇತು' ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು, ಈ ಹೆಸರು ಶಾಂತಿಯ ಸಂದೇಶವನ್ನು ರವಾನಿಸಲಿದೆ. ದೇಶದಲ್ಲಿ ಆತಂಕಕಾರಿ ಪರಿಸ್ಥಿತಿಯಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೋಮು ಸೌಹಾರ್ದತೆ ಕದಡಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ್ ಜೋಡೊ ಸೇತು ಎಂದು ಕರೆಯುವುದು ಧನಾತ್ಮಕ ಸಂದೇಶವನ್ನು ನೀಡಲಿದೆ ಎಂದು ಹೇಳಿದರು.