ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ 'ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ' ಎಂದು ಹೇಳಿರುವುದು ವಿವಾದ ಹುಟ್ಟುಹಾಕಿದೆ.
ತಮಿಳುನಾಡಿನ ರಾಜಕಾರಿಣಿಗಳು ಆಯುಷ್ ಕಾರ್ಯದರ್ಶಿಯ ಹೇಳಿಕೆಯನ್ನು'ಇದುಹಿಂದಿ ಹೇರಿಕೆ ಮನಸ್ಥಿತಿ ಇರುವವರ ಕರಾಳಮುಖವನ್ನು ತೋರಿಸುತ್ತದೆ'ಖಂಡಿಸಿದ್ದಾರೆ.
'ಕೋಟೆಚಾ ಅವರನ್ನು ತಕ್ಷಣ ಅಮಾನತು ಮಾಡಬೇಕು. ಶಿಸ್ತುಕ್ರಮ ಜರುಗಿಸಬೇಕು' ಎಂದುಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದು ಹಿಂದಿಹೇರಿಕೆಯ ಬಗ್ಗೆ ಸಾಕಷ್ಟು ತಿಳಿಸುತ್ತದೆ. ಇದು ಖಂಡನಾರ್ಹ. ಇನ್ನೂ ಎಷ್ಟು ದಿನಗಳ ಕಾಲ ಹಿಂದಿ ಬಾರದವರನ್ನು ಹೊರಗಿಸುವ ಮನಸ್ಥಿತಿಯನ್ನು ಸಹಿಸಿಕೊಳ್ಳಬೇಕು' ಎಂದು ಕಿಡಿಕಾರಿದ್ದಾರೆ.
The statement of Secretary of the Union Ministry of AYUSH Vaidya Rajesh Kotecha that non Hindi speaking participants could leave during a Ministry’s training session speaks volumes about the Hindi domination being imposed.This is highly condemnable... 1/4#StopHindiImposition
— Kanimozhi (கனிமொழி) (@KanimozhiDMK) August 22, 2020
'ಹಿಂದಿ ಬಾರದ ತಮಿಳುನಾಡು ಪ್ರತಿನಿಧಿಗಳನ್ನು ಆಯುಷ್ ತರಬೇತಿ ಕಾರ್ಯಾಗಾರವು ನಿರ್ಲಕ್ಷಿಸಿದೆ. ಅವರಿಗೆ ಹಿಂದಿ ಬರುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಹಿಂದಿ ಬಾರದವರು ಕಾರ್ಯಾಗಾರದಿಂದ ಹೊರನಡೆಯಬೇಕು ಎಂದು ಹೇಳುವುದಾಗಲೀ ಅಥವಾ ಹಿಂದಿಯಲ್ಲಿಯೇ ಮಾತನಾಡಬೇಕು ಎಂದು ಆಗ್ರಹಿಸುವುದನ್ನಾಗಲೀ ಒಪ್ಪಲು ಸಾಧ್ಯವಿಲ್ಲ' ಎಂದು ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.
AYUSH training in Hindi ignores Tamil Nadu delegates - The Hindu https://t.co/gE52LTUlGZ Not knowing English is understandable, but this arrogance of asking those who don’t know Hindi to leave and insisting on speaking in Hindi is totally unacceptable. #StopHindiImposition
— Karti P Chidambaram (@KartiPC) August 22, 2020
'ತಮಿಳು ಅಥವಾ ಇಂಗ್ಲಿಷ್ನಲ್ಲಿ ಮಾತನಾಡಿ' ಎಂದು ಹೇಳಿದ್ದ ಕನಿಮೋಳಿ ಅವರಿಗೆಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಅಧಿಕಾರಿಯೊಬ್ಬರು 'ನೀವು ಭಾರತೀಯರೇ?' ಎಂದು ಪ್ರಶ್ನಿಸಿದ್ದರು. ಈ ಪ್ರಕರಣದ ನಂತರ ಸಿಐಎಸ್ಎಫ್ ವಿಚಾರಣೆಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
My letter to the Honorable Union Minister @shripadynaik on the reported hindi imposition.#StopHindiImposition pic.twitter.com/Wzlib2f9fl
— Kanimozhi (கனிமொழி) (@KanimozhiDMK) August 22, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.