<p><strong>ತಿರುವನಂತಪುರ:</strong> ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿಯಾಗುತ್ತಿರುವ ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿರುವ 500 ಗಣ್ಯವ್ಯಕ್ತಿಗಳಲ್ಲಿ (ವಿಐಪಿ) ಬೀಡಿ ಕಾರ್ಮಿಕರೊಬ್ಬರು ಸೇರಿದ್ದಾರೆ!</p>.<p>ಕಣ್ಣೂರಿನ ಕುರುವ ಗ್ರಾಮದ ಚಲಾದನ್ ಜನಾರ್ಧನನ್ ವಿಶೇಷ ಆಹ್ವಾನಕ್ಕೆ ಭಾಜನರಾದ ಬೀಡಿ ಕಾರ್ಮಿಕ. ಚಲಾದನ್ ಅವರು ಕೋವಿಡ್ ಲಸಿಕಾ ಆಂದೋಲನದ ಭಾಗವಾಗಿ ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು.</p>.<p>ಚಲಾದನ್ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ₹ 2,00,850 ಹಣದಲ್ಲಿ ₹ 2ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದರು. ಅವರ ಈ ಕಾರ್ಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.</p>.<p>ಗುರುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಧಿಕಾರಿಗಳು ಚಲಾದನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಲು ತಿರುವನಂತಪುರಕ್ಕೆ ಪ್ರಯಾಣಿಸುವುದನ್ನು ತಡೆಯಬಹುದಾಗಿದೆ.</p>.<p>‘ನನ್ನ ಜೀವನದಲ್ಲಿ ಇಂಥದ್ದೊಂದು ಸಂದರ್ಭ ಬರುತ್ತದೆ ಎಂದು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ’ ಎಂದು ಚಲಾದನ್ ಜನಾರ್ದನನ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.</p>.<p>63 ವರ್ಷದ ಚಲಾದನ್ ಅವರು ಯುವಕನಿದ್ದಾಗಿನಿಂದಲೇ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಕಣ್ಣೂರಿನ ಜನಪ್ರಿಯ ಕಾರ್ಮಿಕರ ಸಹಕಾರಿ ದಿನೇಶ್ ಬೀಡಿ ಸಂಸ್ಥೆಯಲ್ಲೂ ಅವರು ಕೆಲಸ ಮಾಡಿದ್ದಾರೆ.</p>.<p>‘ಪಿಣರಾಯಿ ವಿಜಯನ್ ಅವರು ಸರ್ಕಾರದ ವತಿಯಿಂದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಹಾಗಾಗಿ, ಸಿಪಿಎಂ ಬೆಂಬಲಿಗನಾಗಿ ನಾನು ನನ್ನ ಉಳಿತಾಯದ ಪೂರ್ಣ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವ ನಿರ್ಧಾರ ಮಾಡಿದೆ’ ಎಂದು ಚಲಾದನ್ ತಿಳಿಸಿದ್ದಾರೆ.</p>.<p>ಹೆಂಡತಿಯನ್ನು ಕಳೆದುಕೊಂಡು ವಿಧುರನಾಗಿರುವ ಚಲಾದನ್ ಅವರ ನಿರ್ಧಾರಕ್ಕೆ ಅವರ ಇಬ್ಬರು ಮಕ್ಕಳು ಬೆಂಬಲ ವ್ಯಕ್ತಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿಯಾಗುತ್ತಿರುವ ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿತರಾಗಿರುವ 500 ಗಣ್ಯವ್ಯಕ್ತಿಗಳಲ್ಲಿ (ವಿಐಪಿ) ಬೀಡಿ ಕಾರ್ಮಿಕರೊಬ್ಬರು ಸೇರಿದ್ದಾರೆ!</p>.<p>ಕಣ್ಣೂರಿನ ಕುರುವ ಗ್ರಾಮದ ಚಲಾದನ್ ಜನಾರ್ಧನನ್ ವಿಶೇಷ ಆಹ್ವಾನಕ್ಕೆ ಭಾಜನರಾದ ಬೀಡಿ ಕಾರ್ಮಿಕ. ಚಲಾದನ್ ಅವರು ಕೋವಿಡ್ ಲಸಿಕಾ ಆಂದೋಲನದ ಭಾಗವಾಗಿ ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದರು.</p>.<p>ಚಲಾದನ್ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು ₹ 2,00,850 ಹಣದಲ್ಲಿ ₹ 2ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದರು. ಅವರ ಈ ಕಾರ್ಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.</p>.<p>ಗುರುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಧಿಕಾರಿಗಳು ಚಲಾದನ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಲು ತಿರುವನಂತಪುರಕ್ಕೆ ಪ್ರಯಾಣಿಸುವುದನ್ನು ತಡೆಯಬಹುದಾಗಿದೆ.</p>.<p>‘ನನ್ನ ಜೀವನದಲ್ಲಿ ಇಂಥದ್ದೊಂದು ಸಂದರ್ಭ ಬರುತ್ತದೆ ಎಂದು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ’ ಎಂದು ಚಲಾದನ್ ಜನಾರ್ದನನ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.</p>.<p>63 ವರ್ಷದ ಚಲಾದನ್ ಅವರು ಯುವಕನಿದ್ದಾಗಿನಿಂದಲೇ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಕಣ್ಣೂರಿನ ಜನಪ್ರಿಯ ಕಾರ್ಮಿಕರ ಸಹಕಾರಿ ದಿನೇಶ್ ಬೀಡಿ ಸಂಸ್ಥೆಯಲ್ಲೂ ಅವರು ಕೆಲಸ ಮಾಡಿದ್ದಾರೆ.</p>.<p>‘ಪಿಣರಾಯಿ ವಿಜಯನ್ ಅವರು ಸರ್ಕಾರದ ವತಿಯಿಂದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಹಾಗಾಗಿ, ಸಿಪಿಎಂ ಬೆಂಬಲಿಗನಾಗಿ ನಾನು ನನ್ನ ಉಳಿತಾಯದ ಪೂರ್ಣ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವ ನಿರ್ಧಾರ ಮಾಡಿದೆ’ ಎಂದು ಚಲಾದನ್ ತಿಳಿಸಿದ್ದಾರೆ.</p>.<p>ಹೆಂಡತಿಯನ್ನು ಕಳೆದುಕೊಂಡು ವಿಧುರನಾಗಿರುವ ಚಲಾದನ್ ಅವರ ನಿರ್ಧಾರಕ್ಕೆ ಅವರ ಇಬ್ಬರು ಮಕ್ಕಳು ಬೆಂಬಲ ವ್ಯಕ್ತಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>