‘ಪಂಜಾಬ್ ರಾಜ್ಯದ ಎಜಿಯವರೇ, ನ್ಯಾಯವು ಕುರುಡು, ಪಂಜಾಬ್ ರಾಜ್ಯದ ಜನರು ಕುರುಡರಲ್ಲ. ಧರ್ಮಗ್ರಂಥ ಅವಮಾನ ಪ್ರಕರಣಗಳಲ್ಲಿ ನ್ಯಾಯ ಒದಗಿಸುವ ಆಶ್ವಾಸನೆ ಕೊಟ್ಟು ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದೇ ಪ್ರಕರಣಗಳ ಸಂಚುಕೋರರು ಮತ್ತು ಆರೋಪಿಗಳು ಹಾಗೂ ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದವರ ಪರ ನೀವು ವಕಾಲತ್ತು ವಹಿಸಿದ್ದೀರಿ’ ಎಂದು ಸಿಧು ಟ್ವೀಟ್ನಲ್ಲಿ ಕಿಡಿಕಾರಿದ್ದಾರೆ.