ಈ ಪ್ರಕರಣದ ಮುಖ್ಯ ಆರೋಪಿಯಾದ ಟಿಎಂಸಿ ಮುಖಂಡನ ಪುತ್ರನ ಮನೆಯಲ್ಲಿ ಏಪ್ರಿಲ್ 4ರಂದು ನಡೆದ ಹುಟ್ಟುಹಬ್ಬದ ಸಂಭ್ರಮದ ಕಾರ್ಯಕ್ರಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಘಟನೆ ಬಳಿಕ ಆಕೆ ಮೃತಪಟ್ಟಿದ್ದಳು. ಜೊತೆಗೆ ಆಕೆಯ ಮೃತದೇಹವನ್ನು ಆರೋಪಿಯು ಗನ್ ಪಾಯಿಂಟ್ನಲ್ಲಿ ಕೊಂಡೊಯ್ದು, ಸಂಸ್ಕಾರ ನಡೆಸಿದ್ದ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ ಏಪ್ರಿಲ್ 10ರಂದು ದೂರು ದಾಖಲಿಸಿದ್ದರು.