<p class="title"><strong>ಬುಲ್ಧಾನಾ:</strong>ಭಾರತ್ ಜೋಡೊ ಯಾತ್ರೆಯು ರಾಷ್ಟ್ರ ರಾಜಕಾರಣ ಮತ್ತು ಪಕ್ಷಕ್ಕೆ ‘ಕ್ರಾಂತಿಕಾರಿ ಕ್ಷಣ’. ಅದನ್ನು ಚುನಾವಣಾ ಯಶಸ್ಸಾಗಿ ಪರಿವರ್ತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.</p>.<p>ಮಹಾರಾಷ್ಟ್ರದಲ್ಲಿ ಯಾತ್ರೆಯ ಕೊನೆ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಪರ್ಯಾಯ ಹುಡುಕುತ್ತಿದ್ದರು ಹಾಗೂ ಬಿಜೆಪಿ ಮತ್ತು ಆರ್ಎಸ್ಎಸ್ ತೊಡೆದು ಹಾಕಲು ಬಯಸುತ್ತಿದ್ದಾರೆ ಎಂದು ಹೇಳಿದರು.</p>.<p>ಬಿಜೆಪಿ ಮತ್ತು ಆರ್ಎಸ್ಎಸ್ಗೆ ಪರ್ಯಾಯವನ್ನು ಪ್ರಸ್ತುತಪಡಿಸುವ ಏಕೈಕ ಸಿದ್ಧಾಂತವೆಂದರೆ ಕಾಂಗ್ರೆಸ್. ಯಾತ್ರೆಯು ರಾಷ್ಟ್ರ ರಾಜಕಾರಣ ಮತ್ತು ಕಾಂಗ್ರೆಸ್ಗೆ ಕ್ರಾಂತಿಕಾರಿ ಕ್ಷಣವೇ ಹೊರತು ಘಟನೆಯಲ್ಲ ಎಂದು ಹೇಳಿದರು.</p>.<p>ನ.21 ಮತ್ತು 22 ರಂದು ಮಹಾರಾಷ್ಟ್ರದಲ್ಲಿ ವಿರಾಮದ ಬಳಿಕ ನ 23 ರಂದು ಯಾತ್ರೆಯು ಮಧ್ಯಪ್ರದೇಶಕ್ಕೆ ಸಾಗಲಿದೆ ರಮೇಶ್ ಹೇಳಿದರು.</p>.<p>ಕಾಂಗ್ರೆಸ್ನ ಹಿಂದಿನ ವೇಳಾಪಟ್ಟಿಯಂತೆ ಸೋಮವಾರ ಯಾತ್ರೆಯ ವಿಶ್ರಾಂತಿ ದಿನವಾಗಿತ್ತು. ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಸೋಮವಾರ ಗುಜರಾತ್ಗೆ ಭೇಟಿ ನೀಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಬುಲ್ಧಾನಾ:</strong>ಭಾರತ್ ಜೋಡೊ ಯಾತ್ರೆಯು ರಾಷ್ಟ್ರ ರಾಜಕಾರಣ ಮತ್ತು ಪಕ್ಷಕ್ಕೆ ‘ಕ್ರಾಂತಿಕಾರಿ ಕ್ಷಣ’. ಅದನ್ನು ಚುನಾವಣಾ ಯಶಸ್ಸಾಗಿ ಪರಿವರ್ತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.</p>.<p>ಮಹಾರಾಷ್ಟ್ರದಲ್ಲಿ ಯಾತ್ರೆಯ ಕೊನೆ ದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಪರ್ಯಾಯ ಹುಡುಕುತ್ತಿದ್ದರು ಹಾಗೂ ಬಿಜೆಪಿ ಮತ್ತು ಆರ್ಎಸ್ಎಸ್ ತೊಡೆದು ಹಾಕಲು ಬಯಸುತ್ತಿದ್ದಾರೆ ಎಂದು ಹೇಳಿದರು.</p>.<p>ಬಿಜೆಪಿ ಮತ್ತು ಆರ್ಎಸ್ಎಸ್ಗೆ ಪರ್ಯಾಯವನ್ನು ಪ್ರಸ್ತುತಪಡಿಸುವ ಏಕೈಕ ಸಿದ್ಧಾಂತವೆಂದರೆ ಕಾಂಗ್ರೆಸ್. ಯಾತ್ರೆಯು ರಾಷ್ಟ್ರ ರಾಜಕಾರಣ ಮತ್ತು ಕಾಂಗ್ರೆಸ್ಗೆ ಕ್ರಾಂತಿಕಾರಿ ಕ್ಷಣವೇ ಹೊರತು ಘಟನೆಯಲ್ಲ ಎಂದು ಹೇಳಿದರು.</p>.<p>ನ.21 ಮತ್ತು 22 ರಂದು ಮಹಾರಾಷ್ಟ್ರದಲ್ಲಿ ವಿರಾಮದ ಬಳಿಕ ನ 23 ರಂದು ಯಾತ್ರೆಯು ಮಧ್ಯಪ್ರದೇಶಕ್ಕೆ ಸಾಗಲಿದೆ ರಮೇಶ್ ಹೇಳಿದರು.</p>.<p>ಕಾಂಗ್ರೆಸ್ನ ಹಿಂದಿನ ವೇಳಾಪಟ್ಟಿಯಂತೆ ಸೋಮವಾರ ಯಾತ್ರೆಯ ವಿಶ್ರಾಂತಿ ದಿನವಾಗಿತ್ತು. ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಸೋಮವಾರ ಗುಜರಾತ್ಗೆ ಭೇಟಿ ನೀಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>