ಗಣರಾಜ್ಯೋತ್ಸವ ದಿನ ಟ್ರ್ಯಾಕ್ಟರ್ ರ್ಯಾಲಿ ವೇಳೆ ದೆಹಲಿಯಲ್ಲಿ ರೈತರು ಕೆಂಪುಕೋಟೆಗೆ ನುಗ್ಗಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಟ್ರ್ಯಾಕ್ಟರ್ ಚಲಾಯಿಸುತ್ತಿದ್ದವರು ಅವಿದ್ಯಾವಂತರಾಗಿದ್ದು, ಅವರಿಗೆ ದೆಹಲಿಯ ದಾರಿ ಗೊತ್ತಿರಲಿಲ್ಲ. ಆಡಳಿತವು ಅವರಿಗೆ ದೆಹಲಿಯ ದಾರಿ ತೋರಿಸಿತ್ತು. ಅದರಂತೆ ಅವರು ದೆಹಲಿಗೆ ತೆರಳಿ ಮನೆಗಳಿಗೆ ವಾಪಸಾಗಿದ್ದಾರೆ. ಅವರಲ್ಲಿ ಕೆಲವರು ಹಾದಿ ತಿಳಿಯದೆ ಕೆಂಪುಕೋಟೆಯತ್ತ ತೆರಳಿದ್ದಾರೆ. ಪೊಲೀಸರು ಅವರಿಗೆ ಹಿಂತಿರುಗುವಂತೆ ಮಾರ್ಗದರ್ಶನ ನೀಡಿದ್ದರು’ ಎಂದು ಹೇಳಿದ್ದಾರೆ.