ಬಘೆಲ್ ಅವರು ಆಂತರಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಪೈಲಟ್ ಅವರು ರಾಜ್ಯದಲ್ಲಿ ಕೆಲವು ಬದಲಾವಣೆ ಬಯಸಿ ಅಧ್ಯಕ್ಷೆ ಜತೆ ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನ ವೀಕ್ಷಕರಾಗಿರುವ ಕಾರಣ, ಚುನಾವಣೆ ಕುರಿತು ಚರ್ಚಿಸಲು ಬಘೆಲ್ ಅವರು ಪಕ್ಷದ ಅಧ್ಯಕ್ಷೆ ಅವರನ್ನು ಭೇಟಿಯಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.