<p><strong>ನವದೆಹಲಿ: </strong>ಬಿಹಾರದಲ್ಲಿ ಕೋವಿಡ್ನಿಂದಾಗಿ ಮೃತಪಟ್ಟವರ ಪ್ರಮಾಣ 24 ತಾಸುಗಳೊಳಗೆ ಶೇ 72ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಕೋವಿಡ್ನಿಂದ ಸತ್ತವರ ಸಂಖ್ಯೆಯು ಸರಿಯಾಗಿ ದಾಖಲಾಗುತ್ತಿಲ್ಲ ಎಂಬ ಬಹುಕಾಲದ ಅನುಮಾನಕ್ಕೆ ಇದು ಪುಷ್ಟಿ ನೀಡಿದೆ.</p>.<p>ಜೂನ್ 7ರವರೆಗೆ ಬಿಹಾರದಲ್ಲಿ ಕೋವಿಡ್ನಿಂದ ಮೃತರಾದವರ ಸಂಖ್ಯೆ 5,424 ಇತ್ತು. ಆದರೆ, ಮರುದಿನ ಈ ಸಂಖ್ಯೆ 9,375ಕ್ಕೆ ಏರಿದೆ. ಪಟ್ನಾ ಹೈಕೋರ್ಟ್ನ ಆದೇಶದಂತೆ ಬಿಹಾರ ಸರ್ಕಾರವು ಸಾವಿನ ಸಂಖ್ಯೆಯನ್ನು ಮರುಪರಿಶೀಲನೆ ನಡೆಸಿದ್ದರಿಂದ ಈ ಹೆಚ್ಚಳ ಆಗಿದೆ. 3,951 ಪ್ರಕರಣಗಳು ಹೊಸದಾಗಿ ಸೇರ್ಪಡೆ ಆಗಿವೆ.</p>.<p>ಅತಿ ದೊಡ್ಡ ಪ್ರಮಾಣದ ಹೆಚ್ಚಳ ಪಟ್ನಾದಲ್ಲಿ ಕಂಡು ಬಂದಿದೆ. ಜೂನ್ 8ರ ಪ್ರಕಾರ, ಪಟ್ನಾದಲ್ಲಿ 2,293 ಮಂದಿ ಮೃತಪಟ್ಟಿದ್ದಾರೆ. ಆದರೆ, ಒಂದು ದಿನ ಹಿಂದೆ ಇದು 1,223 ಆಗಿತ್ತು. ಏರಿಕೆಯ ಪ್ರಮಾಣವು ಶೇ 80ರಷ್ಟಾಗಿದೆ.</p>.<p>ಕೋವಿಡ್ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಇತರ ಜಿಲ್ಲೆಗಳೆಂದರೆ ಮುಝಫ್ಫರ್ಪುರ (294ರಿಂದ 608), ಮಧುಬನಿ (154ರಿಂದ 316), ಬೇಗುಸರಾಯ್ (138ರಿಂದ 454), ಪೂರ್ವ ಚಂಪಾರಣ್ (131ರಿಂದ 422)ಮತ್ತು ನಳಂದ (240ರಿಂದ 462).</p>.<p>‘ಬಿಹಾರದ ಅನುಭವದ ಆಧಾರದಲ್ಲಿ, ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ನಿಂದಾದ ಮರಣದ ಸಂಖ್ಯೆಯ ಮರುಪರಿಶೀಲನೆ ನಡೆಯಬೇಕು ಮತ್ತು ಅಗತ್ಯ ಬಿದ್ದರೆ ಪರಿಷ್ಕರಣೆ ಆಗಬೇಕು. ಬಿಹಾರ ಮತ್ತು ಉತ್ತರ ಪ್ರದೇಶ ಮಾತ್ರವಲ್ಲ, ಕೇರಳ ಸೇರಿ ಎಲ್ಲ ರಾಜ್ಯಗಳಲ್ಲಿಯೂ ಈ ಪ್ರಕ್ರಿಯೆ ನಡೆಯಬೇಕು’ ಎಂದು ಕೋಯಿಕ್ಕೋಡ್ ಐಐಎಂನ ಸಂದರ್ಶಕ ಪ್ರಾಧ್ಯಾಪಕ ರಿಜೊ ಜಾನ್ ಹೇಳಿದ್ದಾರೆ. ಬಿಹಾರದಲ್ಲಿ ಕೋವಿಡ್ ಅಂಕಿ ಅಂಶ ಸಮರ್ಪಕವಾಗಿಲ್ಲ ಎಂದು ಬಹಳ ಹಿಂದೆಯೇ ಅವರು ಅನುಮಾನ ವ್ಯಕ್ತಪಡಿಸಿದ್ದರು.</p>.<p>ರಾಜ್ಯ ಸರ್ಕಾರವು ಕೊಟ್ಟ ಅಂಕಿ ಅಂಶಗಳು ಸಂದೇಹಾಸ್ಪದವಾಗಿದ್ದ ಕಾರಣ ಸಾವಿನ ಸಂಖ್ಯೆಯ ಮರುಪರಿಶೀಲನೆಗೆ ಪಟ್ನಾ ಹೈಕೋರ್ಟ್ ಆದೇಶಿಸಿತ್ತು.</p>.<p>ಬಕ್ಸರ್ ಜಿಲ್ಲೆಯ ಒಂದು ಉದಾಹರಣೆಯನ್ನು ನೋಡಬಹುದು. ಮುಕ್ತಿಧಾಮ್ ಚಾರಿತಾರ್ಬನ್ ಎಂಬ ಶವಸಂಸ್ಕಾರ ಮೈದಾನದಲ್ಲಿ ಮೇ 5 ಮತ್ತು ಮೇ 14ರ ನಡುವೆ 10 ದಿನಗಳಲ್ಲಿ 789 ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ ಮಾರ್ಚ್ 1ರಿಂದ ಅದೇ ಜಿಲ್ಲೆಯಲ್ಲಿ ಕೇವಲ ಆರು ಸಾವುಗಳು ಸಂಭವಿಸಿವೆ ಎಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿತು.</p>.<p>‘ನಾವು ಈ ಪ್ರಮಾಣಪತ್ರಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಎಲ್ಲಾ ಸಂಗತಿಗಳನ್ನು ಖಚಿತ ಮೂಲಗಳಿಂದ ಪರಿಶೀಲಿಸಬೇಕು ಮತ್ತು ನಂತರ ಅದನ್ನು ನಮ್ಮ ಮುಂದೆ ಇಡಬೇಕು. ಇಲ್ಲದಿದ್ದರೆ ಅದು ಸುಳ್ಳು ಅಥವಾ ಅಪೂರ್ಣವಾದ ಪ್ರಮಾಣಪತ್ರ ಆಗುತ್ತದೆ’ ಎಂದು ಹೈಕೋರ್ಟ್ ಹೇಳಿತು.</p>.<p>ಸಂದೇಹಾಸ್ಪದ ದತ್ತಾಂಶಗಳು ಬಿಹಾರದಲ್ಲಿ ಮಾತ್ರ ಕಂಡುಬಂದಿಲ್ಲ. ಗುಜರಾತ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಂದ ಇದೇ ರೀತಿಯ ವರದಿಗಳಿವೆ.</p>.<p>‘ಲಭ್ಯವಿರುವ ಅಂದಾಜಿನ ಆಧಾರದ ಮೇಲೆ, ರಾಜ್ಯದಿಂದ ರಾಜ್ಯಕ್ಕೆ ಸಾವಿನ ವರದಿಯು 2ರಿಂದ 10 ಪಟ್ಟು ವ್ಯತ್ಯಾಸವಾಗುತ್ತದೆ’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಹೇಳಿದ್ದಾರೆ.</p>.<p>ಭಾರತದಲ್ಲಿ ಕೋವಿಡ್ ಸಾವು ವರದಿಯಾಗುವ ಪ್ರಮಾಣವು 4.5 ಪಟ್ಟು ಕಡಿಮೆ ಇದೆ ಎಂದು ಮಿಷಿಗನ್ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನ ಅಭಿಪ್ರಾಯಪಟ್ಟಿದೆ. ಆದರೆ ಕೋವಿಡ್ ಸಾವು ಸರಿಯಾಗಿ ವರದಿ ಆಗುತ್ತಿಲ್ಲ ಎಂಬ ಈ ಅಧ್ಯಯನಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಬಿಹಾರದಲ್ಲಿ ಕೋವಿಡ್ನಿಂದಾಗಿ ಮೃತಪಟ್ಟವರ ಪ್ರಮಾಣ 24 ತಾಸುಗಳೊಳಗೆ ಶೇ 72ರಷ್ಟು ಏರಿಕೆಯಾಗಿದೆ. ಭಾರತದಲ್ಲಿ ಕೋವಿಡ್ನಿಂದ ಸತ್ತವರ ಸಂಖ್ಯೆಯು ಸರಿಯಾಗಿ ದಾಖಲಾಗುತ್ತಿಲ್ಲ ಎಂಬ ಬಹುಕಾಲದ ಅನುಮಾನಕ್ಕೆ ಇದು ಪುಷ್ಟಿ ನೀಡಿದೆ.</p>.<p>ಜೂನ್ 7ರವರೆಗೆ ಬಿಹಾರದಲ್ಲಿ ಕೋವಿಡ್ನಿಂದ ಮೃತರಾದವರ ಸಂಖ್ಯೆ 5,424 ಇತ್ತು. ಆದರೆ, ಮರುದಿನ ಈ ಸಂಖ್ಯೆ 9,375ಕ್ಕೆ ಏರಿದೆ. ಪಟ್ನಾ ಹೈಕೋರ್ಟ್ನ ಆದೇಶದಂತೆ ಬಿಹಾರ ಸರ್ಕಾರವು ಸಾವಿನ ಸಂಖ್ಯೆಯನ್ನು ಮರುಪರಿಶೀಲನೆ ನಡೆಸಿದ್ದರಿಂದ ಈ ಹೆಚ್ಚಳ ಆಗಿದೆ. 3,951 ಪ್ರಕರಣಗಳು ಹೊಸದಾಗಿ ಸೇರ್ಪಡೆ ಆಗಿವೆ.</p>.<p>ಅತಿ ದೊಡ್ಡ ಪ್ರಮಾಣದ ಹೆಚ್ಚಳ ಪಟ್ನಾದಲ್ಲಿ ಕಂಡು ಬಂದಿದೆ. ಜೂನ್ 8ರ ಪ್ರಕಾರ, ಪಟ್ನಾದಲ್ಲಿ 2,293 ಮಂದಿ ಮೃತಪಟ್ಟಿದ್ದಾರೆ. ಆದರೆ, ಒಂದು ದಿನ ಹಿಂದೆ ಇದು 1,223 ಆಗಿತ್ತು. ಏರಿಕೆಯ ಪ್ರಮಾಣವು ಶೇ 80ರಷ್ಟಾಗಿದೆ.</p>.<p>ಕೋವಿಡ್ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಇತರ ಜಿಲ್ಲೆಗಳೆಂದರೆ ಮುಝಫ್ಫರ್ಪುರ (294ರಿಂದ 608), ಮಧುಬನಿ (154ರಿಂದ 316), ಬೇಗುಸರಾಯ್ (138ರಿಂದ 454), ಪೂರ್ವ ಚಂಪಾರಣ್ (131ರಿಂದ 422)ಮತ್ತು ನಳಂದ (240ರಿಂದ 462).</p>.<p>‘ಬಿಹಾರದ ಅನುಭವದ ಆಧಾರದಲ್ಲಿ, ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ನಿಂದಾದ ಮರಣದ ಸಂಖ್ಯೆಯ ಮರುಪರಿಶೀಲನೆ ನಡೆಯಬೇಕು ಮತ್ತು ಅಗತ್ಯ ಬಿದ್ದರೆ ಪರಿಷ್ಕರಣೆ ಆಗಬೇಕು. ಬಿಹಾರ ಮತ್ತು ಉತ್ತರ ಪ್ರದೇಶ ಮಾತ್ರವಲ್ಲ, ಕೇರಳ ಸೇರಿ ಎಲ್ಲ ರಾಜ್ಯಗಳಲ್ಲಿಯೂ ಈ ಪ್ರಕ್ರಿಯೆ ನಡೆಯಬೇಕು’ ಎಂದು ಕೋಯಿಕ್ಕೋಡ್ ಐಐಎಂನ ಸಂದರ್ಶಕ ಪ್ರಾಧ್ಯಾಪಕ ರಿಜೊ ಜಾನ್ ಹೇಳಿದ್ದಾರೆ. ಬಿಹಾರದಲ್ಲಿ ಕೋವಿಡ್ ಅಂಕಿ ಅಂಶ ಸಮರ್ಪಕವಾಗಿಲ್ಲ ಎಂದು ಬಹಳ ಹಿಂದೆಯೇ ಅವರು ಅನುಮಾನ ವ್ಯಕ್ತಪಡಿಸಿದ್ದರು.</p>.<p>ರಾಜ್ಯ ಸರ್ಕಾರವು ಕೊಟ್ಟ ಅಂಕಿ ಅಂಶಗಳು ಸಂದೇಹಾಸ್ಪದವಾಗಿದ್ದ ಕಾರಣ ಸಾವಿನ ಸಂಖ್ಯೆಯ ಮರುಪರಿಶೀಲನೆಗೆ ಪಟ್ನಾ ಹೈಕೋರ್ಟ್ ಆದೇಶಿಸಿತ್ತು.</p>.<p>ಬಕ್ಸರ್ ಜಿಲ್ಲೆಯ ಒಂದು ಉದಾಹರಣೆಯನ್ನು ನೋಡಬಹುದು. ಮುಕ್ತಿಧಾಮ್ ಚಾರಿತಾರ್ಬನ್ ಎಂಬ ಶವಸಂಸ್ಕಾರ ಮೈದಾನದಲ್ಲಿ ಮೇ 5 ಮತ್ತು ಮೇ 14ರ ನಡುವೆ 10 ದಿನಗಳಲ್ಲಿ 789 ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಆದರೆ ಮಾರ್ಚ್ 1ರಿಂದ ಅದೇ ಜಿಲ್ಲೆಯಲ್ಲಿ ಕೇವಲ ಆರು ಸಾವುಗಳು ಸಂಭವಿಸಿವೆ ಎಂದು ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿತು.</p>.<p>‘ನಾವು ಈ ಪ್ರಮಾಣಪತ್ರಗಳ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಎಲ್ಲಾ ಸಂಗತಿಗಳನ್ನು ಖಚಿತ ಮೂಲಗಳಿಂದ ಪರಿಶೀಲಿಸಬೇಕು ಮತ್ತು ನಂತರ ಅದನ್ನು ನಮ್ಮ ಮುಂದೆ ಇಡಬೇಕು. ಇಲ್ಲದಿದ್ದರೆ ಅದು ಸುಳ್ಳು ಅಥವಾ ಅಪೂರ್ಣವಾದ ಪ್ರಮಾಣಪತ್ರ ಆಗುತ್ತದೆ’ ಎಂದು ಹೈಕೋರ್ಟ್ ಹೇಳಿತು.</p>.<p>ಸಂದೇಹಾಸ್ಪದ ದತ್ತಾಂಶಗಳು ಬಿಹಾರದಲ್ಲಿ ಮಾತ್ರ ಕಂಡುಬಂದಿಲ್ಲ. ಗುಜರಾತ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಿಂದ ಇದೇ ರೀತಿಯ ವರದಿಗಳಿವೆ.</p>.<p>‘ಲಭ್ಯವಿರುವ ಅಂದಾಜಿನ ಆಧಾರದ ಮೇಲೆ, ರಾಜ್ಯದಿಂದ ರಾಜ್ಯಕ್ಕೆ ಸಾವಿನ ವರದಿಯು 2ರಿಂದ 10 ಪಟ್ಟು ವ್ಯತ್ಯಾಸವಾಗುತ್ತದೆ’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಬಾಬು ಹೇಳಿದ್ದಾರೆ.</p>.<p>ಭಾರತದಲ್ಲಿ ಕೋವಿಡ್ ಸಾವು ವರದಿಯಾಗುವ ಪ್ರಮಾಣವು 4.5 ಪಟ್ಟು ಕಡಿಮೆ ಇದೆ ಎಂದು ಮಿಷಿಗನ್ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನ ಅಭಿಪ್ರಾಯಪಟ್ಟಿದೆ. ಆದರೆ ಕೋವಿಡ್ ಸಾವು ಸರಿಯಾಗಿ ವರದಿ ಆಗುತ್ತಿಲ್ಲ ಎಂಬ ಈ ಅಧ್ಯಯನಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>