<p><strong>ಪಠಾಣ್ಕೋಟ್:</strong> ಬಿಜೆಪಿ, ಆರ್ಎಸ್ಎಸ್ ದೇಶದಲ್ಲಿ ಭಯ, ದ್ವೇಷ ಮತ್ತು ಹಿಂಸಾಚಾರದ ವಾತಾವರಣ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.</p>.<p>ಪಂಜಾಬ್ನಲ್ಲಿ ಭಾರತ್ ಜೋಡೊ ಯಾತ್ರೆಯ ಕೊನೆಯ ದಿನವಾದ ಗುರುವಾರ ಪಠಾಣ್ಕೋಟ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದೇಶದ ಜನರಲ್ಲಿ ಭಯ, ದ್ವೇಷ ಹುಟ್ಟಿಸುವ ಬಿಜೆಪಿ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಇದನ್ನೂ ಓದಿ: <a href="https://www.prajavani.net/india-news/opposition-unity-in-telangana-what-bihar-chief-minister-nitish-kumar-said-on-this-1007628.html" itemprop="url">ನನಗೊಂದು ಆಸೆ ಇದೆ..: ವಿಪಕ್ಷಗಳ ಒಗ್ಗಟ್ಟಿನ ಕುರಿತು ನಿತೀಶ್ ಹೇಳಿದ್ದೇನು? </a></p>.<p>ಬಿಜೆಪಿ-ಆರ್ಎಸ್ಎಸ್ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಒಂದು ಜಾತಿ ವಿರುದ್ಧ ಮತ್ತೊಂದು, ಒಂದು ಧರ್ಮದ ವಿರುದ್ಧ ಇನ್ನೊಂದು, ಒಂದು ಭಾಷೆಯ ವಿರುದ್ಧ ಮತ್ತೊಂದು ಹೋರಾಡುವಂತೆ ಮಾಡಿದೆ. ಬಿಜೆಪಿಯ ನೀತಿಗಳು ಒಂದಲ್ಲ ಒಂದು ರೀತಿಯಲ್ಲಿ ಭಯ ಹುಟ್ಟಿಸುವಂತೆ ಮಾಡಿವೆ ಎಂದು ಹೇಳಿದರು.</p>.<p>ಹಿಂದಿನ ಯುಪಿಎ ಸರ್ಕಾರದ ಯೋಜನೆಗಳನ್ನು ಉಲ್ಲೇಖ ಮಾಡಿದ ರಾಹುಲ್, ನಾವು ಭಯದ ವಾತಾವರಣವನ್ನು ತೊಡೆದು ಹಾಕಿದೆವು. ಮತ್ತೊಂದೆಡೆ ಬಿಜೆಪಿ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ದೂರಿದರು.</p>.<p>ರೈತರ ಹಿತಕ್ಕಾಗಿ ಬಿಜೆಪಿ ಏನನ್ನೂ ಮಾಡಿಲ್ಲ. ಕೃಷಿ ಕಾನೂನು ಜಾರಿಗೆ ತಂದು ರೈತರಲ್ಲಿ ಭಯ ಹುಟ್ಟಿಸಿದರು ಎಂದು ಹೇಳಿದರು.</p>.<p>ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ, ನೋಟು ಅಮಾನ್ಯೀಕರಣ, ಜಿಎಸ್ಟಿ ವಿರುದ್ಧವೂ ರಾಹುಲ್ ವಾಗ್ದಾಳಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಠಾಣ್ಕೋಟ್:</strong> ಬಿಜೆಪಿ, ಆರ್ಎಸ್ಎಸ್ ದೇಶದಲ್ಲಿ ಭಯ, ದ್ವೇಷ ಮತ್ತು ಹಿಂಸಾಚಾರದ ವಾತಾವರಣ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.</p>.<p>ಪಂಜಾಬ್ನಲ್ಲಿ ಭಾರತ್ ಜೋಡೊ ಯಾತ್ರೆಯ ಕೊನೆಯ ದಿನವಾದ ಗುರುವಾರ ಪಠಾಣ್ಕೋಟ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ದೇಶದ ಜನರಲ್ಲಿ ಭಯ, ದ್ವೇಷ ಹುಟ್ಟಿಸುವ ಬಿಜೆಪಿ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.</p>.<p>ಇದನ್ನೂ ಓದಿ: <a href="https://www.prajavani.net/india-news/opposition-unity-in-telangana-what-bihar-chief-minister-nitish-kumar-said-on-this-1007628.html" itemprop="url">ನನಗೊಂದು ಆಸೆ ಇದೆ..: ವಿಪಕ್ಷಗಳ ಒಗ್ಗಟ್ಟಿನ ಕುರಿತು ನಿತೀಶ್ ಹೇಳಿದ್ದೇನು? </a></p>.<p>ಬಿಜೆಪಿ-ಆರ್ಎಸ್ಎಸ್ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಒಂದು ಜಾತಿ ವಿರುದ್ಧ ಮತ್ತೊಂದು, ಒಂದು ಧರ್ಮದ ವಿರುದ್ಧ ಇನ್ನೊಂದು, ಒಂದು ಭಾಷೆಯ ವಿರುದ್ಧ ಮತ್ತೊಂದು ಹೋರಾಡುವಂತೆ ಮಾಡಿದೆ. ಬಿಜೆಪಿಯ ನೀತಿಗಳು ಒಂದಲ್ಲ ಒಂದು ರೀತಿಯಲ್ಲಿ ಭಯ ಹುಟ್ಟಿಸುವಂತೆ ಮಾಡಿವೆ ಎಂದು ಹೇಳಿದರು.</p>.<p>ಹಿಂದಿನ ಯುಪಿಎ ಸರ್ಕಾರದ ಯೋಜನೆಗಳನ್ನು ಉಲ್ಲೇಖ ಮಾಡಿದ ರಾಹುಲ್, ನಾವು ಭಯದ ವಾತಾವರಣವನ್ನು ತೊಡೆದು ಹಾಕಿದೆವು. ಮತ್ತೊಂದೆಡೆ ಬಿಜೆಪಿ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ದೂರಿದರು.</p>.<p>ರೈತರ ಹಿತಕ್ಕಾಗಿ ಬಿಜೆಪಿ ಏನನ್ನೂ ಮಾಡಿಲ್ಲ. ಕೃಷಿ ಕಾನೂನು ಜಾರಿಗೆ ತಂದು ರೈತರಲ್ಲಿ ಭಯ ಹುಟ್ಟಿಸಿದರು ಎಂದು ಹೇಳಿದರು.</p>.<p>ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ, ನೋಟು ಅಮಾನ್ಯೀಕರಣ, ಜಿಎಸ್ಟಿ ವಿರುದ್ಧವೂ ರಾಹುಲ್ ವಾಗ್ದಾಳಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>