<p class="title"><strong>ಮುಂಬೈ (ಪಿಟಿಐ): </strong>ಉದ್ಯಮಿ ಮುಖೇಶ್ ಅಂಬಾನಿ ಮನೆ ‘ಎಂಟಿಲೀಯಾ’ಗೆ ಬಾಂಬ್ ಇಟ್ಟಿರುವ ಬೆದರಿಕೆ ಹಾಕಿದ್ದ ಮತ್ತು ಉದ್ಯಮಿ ಮನ್ಸುಖ್ ಹಿರೆನ್ ಕೊಲೆ ಪ್ರಕರಣಗಳಲ್ಲಿನ ಬಂಧಿತ ಆರೋಪಿ, ಮಾಜಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಶರ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.</p>.<p class="bodytext">ಇದಕ್ಕೂ ಮೊದಲು ಶರ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಿಶೇಷ ನ್ಯಾಯಾಲಯವು 2022ರ ಫೆಬ್ರುವರಿಯಲ್ಲಿ ತಿರಸ್ಕರಿಸಿತ್ತು. ಇದನ್ನು ಶರ್ಮ ಪ್ರಶ್ನಿಸಿ, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಮತ್ತು ಆರ್.ಎನ್. ಲಡ್ಡಾ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿದೆ. </p>.<p class="bodytext">ಸ್ಫೋಟಕ ತುಂಬಿದ್ದ ಎಸ್ಯುವಿ ವಾಹನ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈನ ನಿವಾಸ ‘ಎಂಟಿಲೀಯಾ’ ಬಳಿ 2021ರ ಫೆಬ್ರುವರಿ 25ರಂದು ಪತ್ತೆಯಾಗಿತ್ತು. ಈ ವಾಹನವು ಹಿರೆನ್ ಅವರಿಗೆ ಸೇರಿದ್ದಾಗಿತ್ತು. ಹಿರೆನ್ ಅವರ ಮೃತದೇಹವು 2022ರ ಮಾರ್ಚ್ನಲ್ಲಿ ಥಾಣೆಯಲ್ಲಿ ಪತ್ತೆಯಾಗಿತ್ತು. </p>.<p class="bodytext">ಹಿರೆನ್ ಕೊಲೆಯ ಸಂಚುಕೋರರಲ್ಲಿ ಒಬ್ಬನಾದ ಶರ್ಮನನ್ನು ಎನ್ಐಎ ಬಂಧಿಸಿತ್ತು. ಹಿರೆನ್ ಕೊಲೆಗೆ ಶರ್ಮ ತಮ್ಮ ಮಾಜಿ ಸಹೋದ್ಯೋಗಿ ಸಚಿನ್ ವಾಝೆಗೆ ಸಹಕರಿಸಿರುವ ಆರೋಪವನ್ನು ಎನ್ಐಎ ಹೊರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಮುಂಬೈ (ಪಿಟಿಐ): </strong>ಉದ್ಯಮಿ ಮುಖೇಶ್ ಅಂಬಾನಿ ಮನೆ ‘ಎಂಟಿಲೀಯಾ’ಗೆ ಬಾಂಬ್ ಇಟ್ಟಿರುವ ಬೆದರಿಕೆ ಹಾಕಿದ್ದ ಮತ್ತು ಉದ್ಯಮಿ ಮನ್ಸುಖ್ ಹಿರೆನ್ ಕೊಲೆ ಪ್ರಕರಣಗಳಲ್ಲಿನ ಬಂಧಿತ ಆರೋಪಿ, ಮಾಜಿ ಪೊಲೀಸ್ ಸಿಬ್ಬಂದಿ ಪ್ರದೀಪ್ ಶರ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.</p>.<p class="bodytext">ಇದಕ್ಕೂ ಮೊದಲು ಶರ್ಮ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ವಿಶೇಷ ನ್ಯಾಯಾಲಯವು 2022ರ ಫೆಬ್ರುವರಿಯಲ್ಲಿ ತಿರಸ್ಕರಿಸಿತ್ತು. ಇದನ್ನು ಶರ್ಮ ಪ್ರಶ್ನಿಸಿ, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಮತ್ತು ಆರ್.ಎನ್. ಲಡ್ಡಾ ಅವರಿದ್ದ ವಿಭಾಗೀಯ ಪೀಠವು ತಿರಸ್ಕರಿಸಿದೆ. </p>.<p class="bodytext">ಸ್ಫೋಟಕ ತುಂಬಿದ್ದ ಎಸ್ಯುವಿ ವಾಹನ ಉದ್ಯಮಿ ಮುಖೇಶ್ ಅಂಬಾನಿ ಅವರ ಮುಂಬೈನ ನಿವಾಸ ‘ಎಂಟಿಲೀಯಾ’ ಬಳಿ 2021ರ ಫೆಬ್ರುವರಿ 25ರಂದು ಪತ್ತೆಯಾಗಿತ್ತು. ಈ ವಾಹನವು ಹಿರೆನ್ ಅವರಿಗೆ ಸೇರಿದ್ದಾಗಿತ್ತು. ಹಿರೆನ್ ಅವರ ಮೃತದೇಹವು 2022ರ ಮಾರ್ಚ್ನಲ್ಲಿ ಥಾಣೆಯಲ್ಲಿ ಪತ್ತೆಯಾಗಿತ್ತು. </p>.<p class="bodytext">ಹಿರೆನ್ ಕೊಲೆಯ ಸಂಚುಕೋರರಲ್ಲಿ ಒಬ್ಬನಾದ ಶರ್ಮನನ್ನು ಎನ್ಐಎ ಬಂಧಿಸಿತ್ತು. ಹಿರೆನ್ ಕೊಲೆಗೆ ಶರ್ಮ ತಮ್ಮ ಮಾಜಿ ಸಹೋದ್ಯೋಗಿ ಸಚಿನ್ ವಾಝೆಗೆ ಸಹಕರಿಸಿರುವ ಆರೋಪವನ್ನು ಎನ್ಐಎ ಹೊರಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>