ಲಖನೌ: ರಾಮಚರಿತಮಾನಸದ ಕೆಲವು ಪುಟಗಳನ್ನು ಗುಂಪೊಂದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಸೇರಿ ಇತರ 10 ಜನರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ವೃಂದಾವನ ಯೋಜನಾ ಸೆಕ್ಟರ್ನಲ್ಲಿ ಅಖಿಲ ಭಾರತೀಯ ಒಬಿಸಿ ಮಹಾಸಭಾ ಭಾನುವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಮಹಿಳೆ ಮತ್ತು ದಲಿತ ಸಮುದಾಯದ ವಿರುದ್ಧ ಹೇಳಿಕೆ ಇರುವ ರಾಮಚರಿತಮಾನಸದ ಕೆಲ ಪುಟಗಳ ಜೆರಾಕ್ಸ್ ಪ್ರತಿಗಳನ್ನು ಮಾತ್ರ ಸುಡಲಾಗಿದೆ ಎಂದು ಸಮುದಾಯ ತಿಳಿಸಿದೆ.
ಸತ್ನಮ್ ಸಿಂಗ್ ಲವಿ ಎಂಬುವವರು ಪಿಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.