<p class="title"><strong>ನವದೆಹಲಿ</strong>: ಕೋವಿಡ್–19 ಪರಿಸ್ಥಿತಿ ಕಾರಣದಿಂದಾಗಿ ಆರೋಗ್ಯ ಸೇವೆ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎರಡನೇ ಕಂತಿನಲ್ಲಿ ಒಟ್ಟು ₹ 890.32 ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.</p>.<p class="title">ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳವನ್ನು ಒಳಗೊಂಡು ಈ ಮೊತ್ತ ಬಿಡುಗಡೆಯಾಗಿದ್ದು, ಕೋವಿಡ್–19 ಪ್ರಕರಣಗಳ ಪ್ರಮಾಣವನ್ನು ಆಧರಿಸಿ ಈ ಆರ್ಥಿಕ ನೆರವನ್ನು ರಾಜ್ಯಗಳಿಗೆ ಹಂಚಿಕೆಯಾಗಲಿದೆ.</p>.<p class="title">ಸೋಂಕು ಪತ್ತೆ ತಪಾಸಣೆಗೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಮೊತ್ತವನ್ನು ಬಳಸಬೇಕು ಎಂದು ತಿಳಿಸಿದೆ.ಸಿಬಿ– ಎನ್ಎಎಟಿ, ಆರ್ಟಿ–ಪಿಸಿಆರ್ ಆಧಾರಿತ ಮಾದರಿಗಳ ಪರೀಕ್ಷಾ ಯಂತ್ರ ಅಳವಡಿಕೆಗೆ, ಆರ್ಎನ್ಎ ಕಿಟ್ ಖರೀದಿ, ಐಸಿಯು ಬೆಡ್ಗಳ ಅಭಿವೃದ್ಧಿ, ಆಮ್ಲಜನಕದ ವ್ಯವಸ್ಥೆಯ ಪ್ರಮಾಣವನ್ನು ಅಧಿಕಗೊಳಿಸುವ ಗುರಿ ಇದೆ.</p>.<p class="title">ಕೋವಿಡ್–19 ವಿರುದ್ಧ ಆರೋಗ್ಯ ಸೇವೆ ಕುರಿತು ತುರ್ತು ಅಗತ್ಯಗಳಿಗಾಗಿ ಕೇಂದ್ರ ₹ 15 ಸಾವಿರ ಕೋಟಿ ಪ್ಯಾಕೇಜ್ ಒದಗಿಸಿದ್ದು, ಇದರ ಭಾಗವಾಗಿ ಎರಡನೇ ಕಂತು ಬಿಡುಗಡೆಆಗಿದೆ.</p>.<p class="title">ಕಳೆದ ಏಪ್ರಿಲ್ನಲ್ಲಿ ₹ 3 ಸಾವಿರ ಕೋಟಿ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಾಗಿತ್ತು. ಪರೀಕ್ಷಾ ಸಾಮರ್ಥ್ಯ ಹೆಚ್ಚಳ, ಆಸ್ಪತ್ರೆಗಳ ಮೂಲಸೌಕರ್ಯದ ಅಭಿವೃದ್ಧಿ, ಅಗತ್ಯ ಉಪಕರಣಗಳ ಖರೀದಿ ಸೇರಿದಂತೆ ಔಷಧ ಮತ್ತು ಇನ್ನಿತರ ಸಾಮಗ್ರಿಗಳನ್ನು ಖರೀಸಲು ಸೂಚಿಸಲಾಗಿತ್ತುಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.</p>.<p>ಈ ನೆರವಿನಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಒಟ್ಟು 5,80,342 ಪ್ರತ್ಯೇಕ ಹಾಸಿಗೆಗಳು, 1,36,068 ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆ ಮತ್ತು 31,255 ಐಸಿಯು ಹಾಸಿಗೆ ಸೌಲಭ್ಯವು ಲಭ್ಯವಾಗಲಿದೆ ಎಂದು ಆಶಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಕೋವಿಡ್–19 ಪರಿಸ್ಥಿತಿ ಕಾರಣದಿಂದಾಗಿ ಆರೋಗ್ಯ ಸೇವೆ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎರಡನೇ ಕಂತಿನಲ್ಲಿ ಒಟ್ಟು ₹ 890.32 ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.</p>.<p class="title">ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳವನ್ನು ಒಳಗೊಂಡು ಈ ಮೊತ್ತ ಬಿಡುಗಡೆಯಾಗಿದ್ದು, ಕೋವಿಡ್–19 ಪ್ರಕರಣಗಳ ಪ್ರಮಾಣವನ್ನು ಆಧರಿಸಿ ಈ ಆರ್ಥಿಕ ನೆರವನ್ನು ರಾಜ್ಯಗಳಿಗೆ ಹಂಚಿಕೆಯಾಗಲಿದೆ.</p>.<p class="title">ಸೋಂಕು ಪತ್ತೆ ತಪಾಸಣೆಗೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಮೊತ್ತವನ್ನು ಬಳಸಬೇಕು ಎಂದು ತಿಳಿಸಿದೆ.ಸಿಬಿ– ಎನ್ಎಎಟಿ, ಆರ್ಟಿ–ಪಿಸಿಆರ್ ಆಧಾರಿತ ಮಾದರಿಗಳ ಪರೀಕ್ಷಾ ಯಂತ್ರ ಅಳವಡಿಕೆಗೆ, ಆರ್ಎನ್ಎ ಕಿಟ್ ಖರೀದಿ, ಐಸಿಯು ಬೆಡ್ಗಳ ಅಭಿವೃದ್ಧಿ, ಆಮ್ಲಜನಕದ ವ್ಯವಸ್ಥೆಯ ಪ್ರಮಾಣವನ್ನು ಅಧಿಕಗೊಳಿಸುವ ಗುರಿ ಇದೆ.</p>.<p class="title">ಕೋವಿಡ್–19 ವಿರುದ್ಧ ಆರೋಗ್ಯ ಸೇವೆ ಕುರಿತು ತುರ್ತು ಅಗತ್ಯಗಳಿಗಾಗಿ ಕೇಂದ್ರ ₹ 15 ಸಾವಿರ ಕೋಟಿ ಪ್ಯಾಕೇಜ್ ಒದಗಿಸಿದ್ದು, ಇದರ ಭಾಗವಾಗಿ ಎರಡನೇ ಕಂತು ಬಿಡುಗಡೆಆಗಿದೆ.</p>.<p class="title">ಕಳೆದ ಏಪ್ರಿಲ್ನಲ್ಲಿ ₹ 3 ಸಾವಿರ ಕೋಟಿ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಾಗಿತ್ತು. ಪರೀಕ್ಷಾ ಸಾಮರ್ಥ್ಯ ಹೆಚ್ಚಳ, ಆಸ್ಪತ್ರೆಗಳ ಮೂಲಸೌಕರ್ಯದ ಅಭಿವೃದ್ಧಿ, ಅಗತ್ಯ ಉಪಕರಣಗಳ ಖರೀದಿ ಸೇರಿದಂತೆ ಔಷಧ ಮತ್ತು ಇನ್ನಿತರ ಸಾಮಗ್ರಿಗಳನ್ನು ಖರೀಸಲು ಸೂಚಿಸಲಾಗಿತ್ತುಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.</p>.<p>ಈ ನೆರವಿನಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಒಟ್ಟು 5,80,342 ಪ್ರತ್ಯೇಕ ಹಾಸಿಗೆಗಳು, 1,36,068 ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆ ಮತ್ತು 31,255 ಐಸಿಯು ಹಾಸಿಗೆ ಸೌಲಭ್ಯವು ಲಭ್ಯವಾಗಲಿದೆ ಎಂದು ಆಶಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>