ತ್ರಿವರ್ಣ ಧ್ವಜ ದುರ್ಬಳಕೆ ವಿಚಾರವಾಗಿ ದೀಪಕ್ ಕೆ ಸಿಂಗ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ಘಟನೆಯ ತನಿಖೆ ನಡೆಸಬೇಕು ಎಂದು ನಾನು ದೆಹಲಿ ಪೊಲೀಸರಲ್ಲಿ ಮನವಿ ಮಾಡುತ್ತೇನೆ. ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿಯ ಮೇಲೆ ನನಗೆ ವೈಯಕ್ತಿಯ ದ್ವೇಷವೇನೂ ಇಲ್ಲ. ಆದರೆ, ಆತನ ಕೃತ್ಯವು ಭಾರತ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ. ಇದು ದೇಶದ್ರೋಹ,' ಎಂದಿದ್ದಾರೆ.