ನವದೆಹಲಿ:ಏಪ್ರಿಲ್ 30ರಂದು ದೇಶದ ಎಲ್ಲ ಮುಖ್ಯಮಂತ್ರಿಗಳು ಹಾಗೂ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿತ್ವರಿತ ನ್ಯಾಯ ವಿತರಣೆ, ವ್ಯಾಜ್ಯಗಳ ಬಾಕಿ ಕಡಿತ, ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ವಿಚಾರಗಳು ಚರ್ಚೆಯ ಮುಖ್ಯ ಕಾರ್ಯಸೂಚಿಗಳಾಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ ಅಧಿಕೃತವಾಗಿ ಸಮಾವೇಶದ ಮುಖ್ಯ ಕಾರ್ಯಸೂಚಿ ಇನ್ನೂ ನಿರ್ಧಾರವಾಗಿಲ್ಲ.