ಸಮೀಪದ ಬಾರಾಮತಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಹಕಾರ ಸಚಿವಾಲಯ ರಚನೆ ಹೊಸ ಪರಿಕಲ್ಪನೆಯೇನಲ್ಲ. ಈ ಹಿಂದಿನ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಇಂಥ ಸಚಿವಾಲಯ ರಚಿಸಬೇಕು ಎಂಬ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಈಗ ಮಾಧ್ಯಮಗಳು ಈ ಸಚಿವಾಲಯದ ಬಗ್ಗೆ ಬೇರೆ ರೀತಿಯ ವ್ಯಾಖ್ಯಾನ ಮಾಡುತ್ತಿವೆ. ಮಹಾರಾಷ್ಟ್ರದಲ್ಲಿನ ಸಹಕಾರ ಚಳವಳಿಯನ್ನು ಕೇಂದ್ರದ ಈ ನಡೆ ನಾಶ ಮಾಡುತ್ತದೆ ಎಂದು ಬಿಂಬಿಸುತ್ತಿವೆ’ ಎಂದರು.