<p><strong>ನವದೆಹಲಿ</strong>: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಕುರಿತು ನಿಖರವಾಗಿ ಮುನ್ಸೂಚನೆ ನೀಡುವುದು ಸಾಧ್ಯವಾಗಲಿಲ್ಲ ಎಂದು ವಿಜ್ಞಾನಿಗಳ ತಂಡವೊಂದು ಭಾನುವಾರ ಹೇಳಿದೆ.</p>.<p>ಕೊರೊನಾ ವೈರಸ್ನ ಎರಡನೇ ಅಲೆ, ಅದರಿಂದಾಗುವ ಹಾನಿ ಕುರಿತು ಈ ವಿಜ್ಞಾನಿಗಳ ಈ ತಂಡ ಗಣಿತ ಮಾದರಿಯೊಂದರ ಆಧಾರದ ಮೇಲೆ ಸಂಶೋಧನೆ ಕೈಗೊಂಡಿದೆ.</p>.<p>‘ಎರಡನೇ ಅಲೆ ವೇಳೆ ಕೊರೊನಾ ವೈರಸ್ ಸೋಂಕು ಎಷ್ಟು ವೇಗವಾಗಿ ಪ್ರಸರಣವಾಗುತ್ತದೆ, ವೈರಸ್ನ ಸ್ವರೂಪ ಹೇಗಿರಲಿದೆ ಹಾಗೂ ಎಷ್ಟು ದಿನಗಳ ವರೆಗೆ ಇದು ಬಾಧಿಸಲಿದೆ ಎಂಬ ಅಂಶಗಳ ಕುರಿತು ಅಂದಾಜಿಸಲು ಆಗಲಿಲ್ಲ’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.</p>.<p>ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಐಐಟಿ–ಕಾನ್ಪುರ ಪ್ರಾಧ್ಯಾಪಕ ಮಣೀಂದ್ರ ಅಗ್ರವಾಲ್, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ನ ಡೆಪ್ಯುಟಿ ಚೀಫ್ ಮಾಧುರಿ ಕಾನಿಟ್ಕರ್, ಐಐಟಿ–ಹೈದರಾಬಾದ್ನ ಪ್ರಾಧ್ಯಾಪಕ ಎಂ.ವಿದ್ಯಾಸಾಗರ ಅವರು ಈ ಪ್ರಕಟಣೆಗೆ ಸಹಿ ಹಾಕಿದ್ದಾರೆ.</p>.<p>‘ಸೂತ್ರ’ ಮಾದರಿ ಆಧಾರದಲ್ಲಿ ಸಂಶೋಧನೆ ಕೈಗೊಂಡಿದ್ದ ವಿಜ್ಞಾನಿಗಳು ಮಾರ್ಚ್ನಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವುದಾಗಿ ಎಚ್ಚರಿಸಿದ್ದರು. ಅವರ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತು ಎಂಬ ವರದಿಗಳನ್ನು ಈ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ.</p>.<p>‘2ನೇ ಅಲೆಯು ಏಪ್ರಿಲ್ನ ಮೂರನೇ ವಾರದಲ್ಲಿ ಗರಿಷ್ಠ ಮಟ್ಟ ತಲುಪಲಿದ್ದು, ಪ್ರತಿ ದಿನ 1 ಲಕ್ಷದಷ್ಟು ಪ್ರಕರಣಗಳು ವರದಿಯಾಗಲಿವೆ ಎಂಬುದಾಗಿ ಗಣಿತ ಮಾದರಿ ಆಧಾರದಲ್ಲಿ ಅಂದಾಜಿಸಲಾಗಿತ್ತು’ ಎಂದು ಈ ವಿಜ್ಞಾನಿಗಳು ವಿವರಿಸಿದ್ದಾರೆ.</p>.<p>‘ಸೋಂಕು ಪ್ರಸರಣ ಕುರಿತು ಕೇಂದ್ರ ಸರ್ಕಾರ ಏಪ್ರಿಲ್ 2ರಂದು ನಮ್ಮ ಅಭಿಪ್ರಾಯ ಕೇಳಿತ್ತು. ಏಪ್ರಿಲ್ ಮೂರನೇ ವಾರದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಬಹುದು ಎಂದು ಸರ್ಕಾರಕ್ಕೆ ಮುನ್ಸೂಚನೆಯನ್ನು ನೀಡಲಾಗಿತ್ತು’ ಎಂದೂ ಹೇಳಿದ್ದಾರೆ.</p>.<p>‘ಕೊರೊನಾ ವೈರಸ್ ಬಹಳ ಕ್ಷಿಪ್ರಗತಿಯಲ್ಲಿ ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ವೈರಸ್ನಿಂದಾಗುವ ಹಾನಿ ಕುರಿತು ನಿರಂತರ ಅಧ್ಯಯನ ನಡೆಸಬೇಕಾಗುತ್ತದೆ. ಕೆಲವೊಮ್ಮೆ ಪ್ರತಿನಿತ್ಯ ಅದರ ಬಗ್ಗೆ ಸಂಶೋಧನೆ ಅಗತ್ಯ’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಕುರಿತು ನಿಖರವಾಗಿ ಮುನ್ಸೂಚನೆ ನೀಡುವುದು ಸಾಧ್ಯವಾಗಲಿಲ್ಲ ಎಂದು ವಿಜ್ಞಾನಿಗಳ ತಂಡವೊಂದು ಭಾನುವಾರ ಹೇಳಿದೆ.</p>.<p>ಕೊರೊನಾ ವೈರಸ್ನ ಎರಡನೇ ಅಲೆ, ಅದರಿಂದಾಗುವ ಹಾನಿ ಕುರಿತು ಈ ವಿಜ್ಞಾನಿಗಳ ಈ ತಂಡ ಗಣಿತ ಮಾದರಿಯೊಂದರ ಆಧಾರದ ಮೇಲೆ ಸಂಶೋಧನೆ ಕೈಗೊಂಡಿದೆ.</p>.<p>‘ಎರಡನೇ ಅಲೆ ವೇಳೆ ಕೊರೊನಾ ವೈರಸ್ ಸೋಂಕು ಎಷ್ಟು ವೇಗವಾಗಿ ಪ್ರಸರಣವಾಗುತ್ತದೆ, ವೈರಸ್ನ ಸ್ವರೂಪ ಹೇಗಿರಲಿದೆ ಹಾಗೂ ಎಷ್ಟು ದಿನಗಳ ವರೆಗೆ ಇದು ಬಾಧಿಸಲಿದೆ ಎಂಬ ಅಂಶಗಳ ಕುರಿತು ಅಂದಾಜಿಸಲು ಆಗಲಿಲ್ಲ’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.</p>.<p>ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಐಐಟಿ–ಕಾನ್ಪುರ ಪ್ರಾಧ್ಯಾಪಕ ಮಣೀಂದ್ರ ಅಗ್ರವಾಲ್, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ನ ಡೆಪ್ಯುಟಿ ಚೀಫ್ ಮಾಧುರಿ ಕಾನಿಟ್ಕರ್, ಐಐಟಿ–ಹೈದರಾಬಾದ್ನ ಪ್ರಾಧ್ಯಾಪಕ ಎಂ.ವಿದ್ಯಾಸಾಗರ ಅವರು ಈ ಪ್ರಕಟಣೆಗೆ ಸಹಿ ಹಾಕಿದ್ದಾರೆ.</p>.<p>‘ಸೂತ್ರ’ ಮಾದರಿ ಆಧಾರದಲ್ಲಿ ಸಂಶೋಧನೆ ಕೈಗೊಂಡಿದ್ದ ವಿಜ್ಞಾನಿಗಳು ಮಾರ್ಚ್ನಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವುದಾಗಿ ಎಚ್ಚರಿಸಿದ್ದರು. ಅವರ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತು ಎಂಬ ವರದಿಗಳನ್ನು ಈ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ.</p>.<p>‘2ನೇ ಅಲೆಯು ಏಪ್ರಿಲ್ನ ಮೂರನೇ ವಾರದಲ್ಲಿ ಗರಿಷ್ಠ ಮಟ್ಟ ತಲುಪಲಿದ್ದು, ಪ್ರತಿ ದಿನ 1 ಲಕ್ಷದಷ್ಟು ಪ್ರಕರಣಗಳು ವರದಿಯಾಗಲಿವೆ ಎಂಬುದಾಗಿ ಗಣಿತ ಮಾದರಿ ಆಧಾರದಲ್ಲಿ ಅಂದಾಜಿಸಲಾಗಿತ್ತು’ ಎಂದು ಈ ವಿಜ್ಞಾನಿಗಳು ವಿವರಿಸಿದ್ದಾರೆ.</p>.<p>‘ಸೋಂಕು ಪ್ರಸರಣ ಕುರಿತು ಕೇಂದ್ರ ಸರ್ಕಾರ ಏಪ್ರಿಲ್ 2ರಂದು ನಮ್ಮ ಅಭಿಪ್ರಾಯ ಕೇಳಿತ್ತು. ಏಪ್ರಿಲ್ ಮೂರನೇ ವಾರದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಬಹುದು ಎಂದು ಸರ್ಕಾರಕ್ಕೆ ಮುನ್ಸೂಚನೆಯನ್ನು ನೀಡಲಾಗಿತ್ತು’ ಎಂದೂ ಹೇಳಿದ್ದಾರೆ.</p>.<p>‘ಕೊರೊನಾ ವೈರಸ್ ಬಹಳ ಕ್ಷಿಪ್ರಗತಿಯಲ್ಲಿ ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ವೈರಸ್ನಿಂದಾಗುವ ಹಾನಿ ಕುರಿತು ನಿರಂತರ ಅಧ್ಯಯನ ನಡೆಸಬೇಕಾಗುತ್ತದೆ. ಕೆಲವೊಮ್ಮೆ ಪ್ರತಿನಿತ್ಯ ಅದರ ಬಗ್ಗೆ ಸಂಶೋಧನೆ ಅಗತ್ಯ’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>