<p><strong>ನವದೆಹಲಿ</strong>: ಕಳ್ಳತನ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧಿಸಿ, ಜಾಮೀನಿಗಾಗಿ ಹಣದ ಬೇಡಿಕೆಯಿಟ್ಟ ದೆಹಲಿ ಪೊಲೀಸರ ವಿರುದ್ಧ ಅಲ್ಲಿನ ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿದೆ.</p>.<p>ರವಿ ನಂದಾ ಎಂಬುವರ ಅಕ್ರಮ ಬಂಧನದ ಕುರಿತಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಂಡ ಬಗ್ಗೆ ಈ ತಿಂಗಳ 13 ರೊಳಗೆ ವರದಿ ಸಲ್ಲಿಸಬೇಕು. ಅಲ್ಲದೆ ಹಣದ ಬೇಡಿಕೆಯಿಟ್ಟ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದ್ವಾರಕದ ಪೊಲೀಸ್ ಉಪ ಆಯುಕ್ತರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು ನಿರ್ದೇಶನ ನೀಡಿದ್ದಾರೆ.</p>.<p>ಅಲ್ಲದೆ ದೆಹಲಿ ನ್ಯಾಯಾಲಯವು ರವಿ ನಂದಾ ಜಾಮೀನು ಮಂಜೂರು ಮಾಡಿದೆ.</p>.<p>ಕಳವು ದೂರಿಗೆ ಹೋಲುವಂತೆ ಬಂಧಿತನ ಸಹೋದರಿಯ ಬಳಿ ಕೆಂಪು ಮತ್ತು ಹಳದಿ ಬಣ್ಣದ ದ್ವಿಚಕ್ರ ವಾಹನವಿತ್ತು. ಈ ಆಧಾರದಲ್ಲಿ ರವಿ ನಂದಾನನ್ನು ಬಂಧಿಸಲಾಗಿತ್ತು. ಆದರೆ ಆರೋಪಿ ಬಳಿಯಿಂದ ಯಾವುದೇ ವಾಹನವನ್ನು ವಶಕ್ಕೆ ಪಡೆದಿಲ್ಲ’ ಎಂದು ತನಿಖಾ ಅಧಿಕಾರಿ (ಐಒ) ನ್ಯಾಯಾಲಯಕ್ಕೆ ತಿಳಿಸಿದ್ದರು.</p>.<p>ಐಒ ಅಕ್ರಮವಾಗಿ ರವಿ ನಂದಾನನ್ನು ಬಂಧಿಸಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕಳ್ಳತನ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧಿಸಿ, ಜಾಮೀನಿಗಾಗಿ ಹಣದ ಬೇಡಿಕೆಯಿಟ್ಟ ದೆಹಲಿ ಪೊಲೀಸರ ವಿರುದ್ಧ ಅಲ್ಲಿನ ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿದೆ.</p>.<p>ರವಿ ನಂದಾ ಎಂಬುವರ ಅಕ್ರಮ ಬಂಧನದ ಕುರಿತಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಂಡ ಬಗ್ಗೆ ಈ ತಿಂಗಳ 13 ರೊಳಗೆ ವರದಿ ಸಲ್ಲಿಸಬೇಕು. ಅಲ್ಲದೆ ಹಣದ ಬೇಡಿಕೆಯಿಟ್ಟ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದ್ವಾರಕದ ಪೊಲೀಸ್ ಉಪ ಆಯುಕ್ತರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು ನಿರ್ದೇಶನ ನೀಡಿದ್ದಾರೆ.</p>.<p>ಅಲ್ಲದೆ ದೆಹಲಿ ನ್ಯಾಯಾಲಯವು ರವಿ ನಂದಾ ಜಾಮೀನು ಮಂಜೂರು ಮಾಡಿದೆ.</p>.<p>ಕಳವು ದೂರಿಗೆ ಹೋಲುವಂತೆ ಬಂಧಿತನ ಸಹೋದರಿಯ ಬಳಿ ಕೆಂಪು ಮತ್ತು ಹಳದಿ ಬಣ್ಣದ ದ್ವಿಚಕ್ರ ವಾಹನವಿತ್ತು. ಈ ಆಧಾರದಲ್ಲಿ ರವಿ ನಂದಾನನ್ನು ಬಂಧಿಸಲಾಗಿತ್ತು. ಆದರೆ ಆರೋಪಿ ಬಳಿಯಿಂದ ಯಾವುದೇ ವಾಹನವನ್ನು ವಶಕ್ಕೆ ಪಡೆದಿಲ್ಲ’ ಎಂದು ತನಿಖಾ ಅಧಿಕಾರಿ (ಐಒ) ನ್ಯಾಯಾಲಯಕ್ಕೆ ತಿಳಿಸಿದ್ದರು.</p>.<p>ಐಒ ಅಕ್ರಮವಾಗಿ ರವಿ ನಂದಾನನ್ನು ಬಂಧಿಸಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>