ಲಸಿಕೆಯ ಶೀಷೆಗಳನ್ನು ಕಸದ ರಾಶಿಗೆ ಎಸೆಯಲಾಗಿತ್ತು ಎಂಬ ವರದಿಗಳನ್ನು ಉಲ್ಲೇಖಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಖಾವತ್, ಲಸಿಕೆ ನೀಡಿಕೆ ವಿಚಾರದಲ್ಲಿ ರಾಜಸ್ಥಾನ ಸರ್ಕಾರವು ಕೇರಳವನ್ನು ನೋಡಿ ಕಲಿಯಬೇಕಿದೆ. ಕೇರಳವು ಲಸಿಕೆ ನೀಡಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಅಲ್ಲಿ ಅತಿ ಕಡಿಮೆ ಡೋಸ್ಗಳು ವ್ಯರ್ಥವಾಗಿದೆ ಎಂದು ಹೇಳಿದ್ದಾರೆ.