‘ಅನಾರೋಗ್ಯಕ್ಕೆ ಚಿಕಿತ್ಸೆ ಮಾತ್ರವಲ್ಲದೆ, ಪಿಡುಗಿನ ಸಂದರ್ಭದಲ್ಲಿ ಉದ್ಭವಿಸುವ ಸಾಮಾಜಿಕ, ಕಾನೂನು ಹಾಗೂ ಇತರೆ ಸಮಸ್ಯೆಗಳನ್ನೂ ಎದುರಿಸಬಲ್ಲ ಸಾಮರ್ಥ್ಯ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಕೋವಿಡ್–19 ಪಿಡುಗಿನ ಹುಟ್ಟು ಹಾಗೂ ಅದು ವಿಶ್ವದಾದ್ಯಂತ ವ್ಯಾಪಿಸಿದ ಬಗೆಯು, ಇಂಥ ತರಬೇತಿಯ ಅಗತ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಬೋರ್ಡ್ ಆಫ್ ಗವರ್ನರ್ಸ್ನ ಮುಖ್ಯಸ್ಥ ಡಾ.ವಿ.ಕೆ.ಪೌಲ್ ತಿಳಿಸಿದ್ದಾರೆ.